ಅಂದರ್‌ ಬಾಹರ್: ಎಂಟು ಮಂದಿಯ ಬಂಧನ

ಕುಂದಾಪುರ, ಆ.18: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.15ರಂದು ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ಕುಂಜೆ ಗ್ರಾಮದ ನೇರಳಕಟ್ಟೆ ಎಂಬಲ್ಲಿರುವ ಸರಕಾರಿ ಹಾಡಿಯಲ್ಲಿ ಶಂಕರ, ಶೇಖರ, ಗಜೇಂದ್ರ, ಮಹೇಶ ಎಂಬವರನ್ನು ಪೊಲೀಸರು ಬಂಧಿಸಿ, 7,320 ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಅದೇ ರೀತಿ ಕಾಳಾವರ ಗ್ರಾಮದ ಸಳ್ವಾಡಿಯ ನಿರೋಣಿ ಮನೆ ಬಳಿಯ ಸರ್ಕಾರಿ ಹಾಡಿಯಲ್ಲಿ ಸಂಜೀವ, ರಾಘವೇಂದ್ರ, ಯೋಗಿಶ, ಭಾಸ್ಕರ ಎಂಬವರನ್ನು ಬಂಧಿಸಿ, 3800ರೂ. ನಗದು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!