ಜಿಲ್ಲಾಡಳಿತದಿಂದ ದಲಿತರ ನಿರ್ಲಕ್ಷ: ಉಡುಪಿ ಉಸ್ತುವಾರಿ ಸಚಿವರನ್ನು ದ‌.ಸಂ.ಸ ತರಾಟೆ

ಉಡುಪಿ: ಜಿಲ್ಲಾಡಳಿತದ ದಲಿತ ವಿರೋಧಿ ನೀತಿ, ಹನೆಹಳ್ಳಿ ಶೂಟೌಟ್ ಪ್ರಕರಣ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಪೋಲಿಸ್ ಸ್ಟೇಷನ್ ಗಳಲ್ಲಿ ದಲಿತ ಧೌರ್ಜನ್ಯ ಕೇಸುಗಳಿಗೆ ಕೌಂಟರ್ ಕೇಸು ಹಾಕುತ್ತಿರುವ ಬಗ್ಗೆ ಇಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷೀ ಹೆಬ್ಬಾಳ್ಕರ್ ರವರನ್ನು ಭೇಟಿಯಾಗಿ ದೂರು ನೀಡಿ ಚರ್ಚಿಸಲಾಯಿತು.

ನಮ್ಮ ಮಾತು ಆಲಿಸಿ ಸಮಾಧಾನಪಡಿಸಿ ಮಾತನಾಡಿದ ಲಕ್ಷೀ ಹೆಬ್ಬಾಳ್ಕರ್ ರವರು ಸೆಪ್ಟೆಂಬರ್ ಎರಡನೇ ವಾರದಲ್ಲಿ ದಲಿತರ ಕುಂದುಕೊರತೆಗಳ ಬಗ್ಗೆ ಪ್ರತ್ಯೇಕ ಸಭೆ ‌ನಡೆಸಿ ಸಮಸ್ಯೆ ಬಗೆಹರಿಸುವುದಾಗೀ ಮಾತು ಕೊಟ್ಟರು.

ಇಂದು ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ಟರ್ ನೇತೃತ್ವದಲ್ಲಿ ಉಸ್ತುವಾರಿ ಸಚಿವರನ್ನು ಭೇಟಿಯಾದ ದಲಿತ ಸಂಘರ್ಷ ಸಮಿತಿ ನಿಯೋಗದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಮಂಜುನಾಥ ಗಿಳಿಯಾರು, ಶ್ಯಾಮಸುಂದರ್ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಶಿವಾನಂದ ಬಿರ್ತಿ,ಗೋಪಾಲ ಕೋಟ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!