ಶ್ರೀಕೃಷ್ಣ ಜನ್ಮಾಷ್ಟಮಿ- ವಿಟ್ಲಪಿಂಡಿಗೆ ಉಡುಪಿ ಜಿಲ್ಲೆಗೆ ರಜೆ ಘೋಷಿಸಲು ಆಗ್ರಹ

ಉಡುಪಿ ಆ.15(ಉಡುಪಿ ಟೈಮ್ಸ್ ವರದಿ): ಶ್ರೀ ಕೃಷ್ಣ ಜನ್ಮಾಷ್ಟಮಿಯ ಎರಡನೇ ದಿನವಾದ ಆ.27 ರಂದು ನಡೆಯುವ ವಿಟ್ಲ ಪಿಂಡಿ(ಮೊಸರು ಕುಡಿಕೆ)ಯಂದು ಉಡುಪಿ ಜಿಲ್ಲೆಗೆ ರಜೆ ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ಉಡುಪಿ ಕಾಂಗ್ರೆಸ್ ಪ್ರಚಾರ ಸಮಿತಿ ಮನವಿ ಮಾಡಿಕೊಂಡಿದೆ.

ಈ ಬಗ್ಗೆ ಮನವಿ ಮಾಡಿಕೊಂಡಿರುವ ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಕೆ. ಕೃಷ್ಣ ಮೂರ್ತಿ ಆಚಾರ್ಯ ಅವರು, ಉಡುಪಿ ಜಿಲ್ಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಬಹಳ ವಿಜೃಂಭಣೆಯಿಂದ ಸುಮಾರು 800 ವರ್ಷಗಳಿಂದ ನಡೆಯುತ್ತಿದ್ದು. ಆ.27 ರಂದು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತಾಭಿಮಾನಿಗಳು ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮುಖ್ಯ ಆಚರಣೆಯಾದ ವಿಟ್ಲ ಪಿಂಡಿ ಉತ್ಸವದಲ್ಲಿ (ಮೊಸರು ಕುಡಿಕೆ) ಭಾಗವಹಿಸುತ್ತಾರೆ. ಆದ್ದರಿಂದ ಆ ದಿನ ಉಡುಪಿ ಜಿಲ್ಲೆಗೆ ಸರಕಾರಿ ರಜೆ ಘೋಷಣೆ ಮಾಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!