ಉಡುಪಿ/ಮಣಿಪಾಲ: ಗಾಂಜಾ ಸೇವನೆ- ಮೂವರ ಸೆರೆ

ಉಡುಪಿ, ಆ.11: ಗಾಂಜಾ ಸೇವನೆಗೆ ಸಂಬಂಧಿಸಿ ಮೂವರನ್ನು ಉಡುಪಿ ಸೆನ್ ಹಾಗೂ ಮಣಿಪಾಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆ.8ರಂದು ಬಡಗುಬೆಟ್ಟು ಗ್ರಾಮದ ಕೊರಂಗ್ರಪಾಡಿ ಆಶಾಕಿರಣ ಬಾರ್ ಬಳಿ ಫಯಾಝ್‌ (30) ಹಾಗೂ ಬಡಗುಬೆಟ್ಟು ಗ್ರಾಮದ ಚಂದು ಮೈದಾನದ ಬಳಿ ಪ್ರಜ್ವಲ್(34) ಎಂಬವರನ್ನು ಉಡುಪಿ ಸೆನ್ ಪೊಲೀಸರು ಮತ್ತು ಮಣಿಪಾಲ ರಾಯಲ್ ಎಂಬೆಸಿ ಬಳಿ ನಿಸಾರ್ ಅನ್ಸಾರ್(25) ಮಣಿಪಾಲ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಹಾಜರು ಪಡಿಸಿದ್ದಾರೆ. ಆ.10ರಂದು ವೈದ್ಯರು ನೀಡಿದ ವರದಿಯಲ್ಲಿ ಇವರು ಮೂವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!