ಉಡುಪಿ: ಎಲೆಕ್ಟ್ರಾನಿಕ್ ಶೋರೂಮ್‌ನ ಮ್ಯಾನೆಜರ್‌ಗೆ ಚೂರಿ ಇರಿತ

ಉಡುಪಿ ಆ.11(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಹರ್ಷ ಶೋ ರೂಂನ ಕ್ಲಸ್ಟರ್ ಮ್ಯಾನೇಜರ್‌ಗೆ ಸೆಕ್ಯುರಿಟಿ ಗಾರ್ಡ್ ಚೂರಿಯಿಂದ ಇರಿದು ಕೊಲೆಗೆ ಯತ್ನಸಿರುವ ಘಟನೆ ಶನಿವಾರ ನಡೆದಿದೆ.

ಈ ಬಗ್ಗೆ ಹಲ್ಲೆಗೆ ಒಳಗಾದ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಹರ್ಷ ಶೋ ರೂಂನ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್‌ ಎವರೆಸ್ಟ್‌ ಡಿʼಸೋಜಾ ಸಂತೆಕಟ್ಟೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮೂರು ದಿನಗಳ ಹಿಂದೆ ಶೋರೂಂನಲ್ಲಿ ಸೆಕ್ಯೂಟಿರಿ ಗಾರ್ಡ್‌ ಆಗಿ ಕೆಲಸವನ್ನು ಮಾಡಿಕೊಂಡಿದ್ದ ಮೆಲ್ವಿನ್‌ ರವರಿಗೆ ಸರಿಯಾಗಿ ಕೆಲಸವನ್ನು ನಿರ್ವಹಿಸುವಂತೆ ಶೋರೂಂನ ಪ್ರವೀಣ್‌ ರವರು ತಿಳಿಸಿದ್ದರು. ಇದಕ್ಕೆ ಕೋಪಗೊಂಡ ಮೆಲ್ವಿನ್‌ ತಾನು ಕೆಲಸ ಮಾಡುವುದಿಲ್ಲ ಹಾಗೂ ಇನ್ನಿಬ್ಬರೂ ಸೆಕ್ಯುರಿಟಿ ಗಾರ್ಡ್‌ ಗಳಿಗೂ ಕೆಲಸವನ್ನು ಮಾಡಲು ಬಿಡುವುದಿಲ್ಲ ಎಂದು ತಿಳಿಸಿ ಹೋಗಿದ್ದನು.

ಬಳಿಕ ಮರುದಿನ ಆ.9ರಂದು ಇಬ್ಬರೂ ಸೆಕ್ಯೂರಿಟಿ ಗಾರ್ಡ್‌ ಗಳಲ್ಲಿ ಪ್ರಸಾದ್‌ ಎಂಬುವವರು ಮಾತ್ರ ಕೆಲಸಕ್ಕೆ ಬಂದಿದ್ದು, ಮಧ್ಯಾಹ್ನದ ವರೆಗೆ ಮಾತ್ರ ಕೆಲಸವನ್ನು ಮಾಡಿ ಹೋಗಿದ್ದನು. ಆದ್ದರಿಂದ ಈ ಬಗ್ಗೆ ಸೆಕ್ಯೂಟಿರಿ ಗಾರ್ಡ್ ಕಂಪನಿಯ ಮ್ಯಾನೇಜರ್‌ ಕಾಶೀನಾಥ್‌ ರವರಿಗೆ ತಿಳಿಸಿದಾಗ ಅವರು ಪ್ರಸಾದನಿಗೆ ಸರಿಯಾಗಿ ಬುದ್ಧಿ ಹೇಳಿ ಕಳುಹಿಸುತ್ತೇನೆ ಎಂದು ತಿಳಿಸಿದ್ದರು.

ಆ ನಂತರ ಆ.10 ರಂದು ಪ್ರಸಾದ್‌‌ನು ಕೆಲಸಕ್ಕೆ ಬಂದು ಬಳಿಕ ಸಂಜೆ ರೋನ್ಸನ್ ಎವರೆಸ್ಟ್‌ ಡಿಸೋಜಾ ಅವರ ಬಳಿ ಬಂದು ತನ್ನನ್ನು ಕೆಲಸದಿಂದ ತೆಗೆಯಬೇಡಿ ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ರೋನ್ಸನ್ ರವರು ಮರುದಿನ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಕ್ಕೆ ಪ್ರಸಾದ ಸಿಟ್ಟುಗೊಂಡು ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ. ಅಲ್ಲದೆ ಆ ಬಳಿಕ ರೋನ್ಸನ್ ರವರು ಸಂಜೆ ವೇಳೆ ಹೋಗುತ್ತಿದ್ದಾಗ ಕಟ್ಟಡದ ಗ್ರೌಂಡ್‌ ಫ್ಲೋರ್‌ನಲ್ಲಿದ್ದ ಪ್ರಸಾದನು ಅವರನ್ನು ಅಡ್ಡಗಟ್ಟಿ ಚೂರಿಯಿಂದ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಚುಚ್ಚಿ ಹಲ್ಲೆ ನಡೆಸಿ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 thought on “ಉಡುಪಿ: ಎಲೆಕ್ಟ್ರಾನಿಕ್ ಶೋರೂಮ್‌ನ ಮ್ಯಾನೆಜರ್‌ಗೆ ಚೂರಿ ಇರಿತ

Leave a Reply

Your email address will not be published. Required fields are marked *

error: Content is protected !!