ಉಡುಪಿ: ಬಸ್ಸಿನ ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಟ- ನಾಲ್ವರ ಸೆರೆ

ಹಿರಿಯಡ್ಕ, ಆ.11: ಸಮಯದ ವಿಚಾರವಾಗಿ ಬಸ್ಸನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಪರಸ್ಪರ ಹೊಡೆದಾಡುತ್ತಿದ್ದ ನಾಲ್ವರನ್ನು ಹಿರಿಯಡ್ಕ ಪೊಲೀಸರು ಹಿರಿಯಡ್ಕ ಜಂಕ್ಷನ್ ಬಳಿ ಆ.9ರಂದು ಸಂಜೆ ವೇಳೆ ಬಂಧಿಸಿದ್ದಾರೆ.

ಬಸ್ಸಿನ ಸಮಯದ ವಿಚಾರವಾಗಿ ಸಾಚಿ ಎಂಬ ಬಸ್‌ನ್ನು ರಾಷ್ಟ್ರೀಯ ಹೆದ್ದಾರಿಗೆ ಮಧ್ಯದಲ್ಲಿ ಅಡ್ಡವಾಗಿ ನಿಲ್ಲಿಸಿ ಶಶಿಕಾಂತ್ (25), ರಾಜೇಶ್(35), ಉಮೇಶ್ (54),ಪ್ರಶಾಂತ್ (40) ಎಂಬವರು ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರ ಶಾಂತಿಗೆ ಭಂಗವನ್ನುಂಟು ಮಾಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!