ಬೈಂದೂರು: ನಾಗರ ಪಂಚಮಿ ಹಾಗೂ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ

ಬೈಂದೂರು : ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದಲ್ಲಿ ಆಗಸ್ಟ್ 9 ಶುಕ್ರವಾರದಂದು ನಾಗರ ಪಂಚಮಿ ನಾಗ ದೇವರಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಉಪ್ಪುಂದ ರಾಘವೇಂದ್ರಸ್ವಾಮಿ ಮಠದ ವಿಚಾರಣಾಕರ್ತ ಸುಭಾಶ್ಚಂದ್ರ ಪುರಾಣಿಕ “ನಾಗಾನುಗ್ರಹ” ಪ್ರಶಸ್ತಿ ಪ್ರಧಾನ ಧಾರ್ಮಿಕ ಸಮಾರಂಭ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರ ಮಾರಣಕಟ್ಟೆ ಇವರಿಗೆ ನಾಗಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಲಾಗುವುದು.

ಬೈಂದೂರು ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ನಾಗಾನುಗ್ರಹ ಪ್ರಶಸ್ತಿ ಸಮಾರಂಭ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಅವರು ನಾಗಾನುಗ್ರಹ ಪ್ರಶಸ್ತಿ ಪ್ರಧಾನ ನೆರವೇರಿಸಲಿದ್ದಾರೆ.

ಕೋಟೇಶ್ವರ ವಾಸ್ತು ತಜ್ಞ, ಯಕ್ಷಗಾನ ಪ್ರಸಂಗ ಕರ್ತರು ಹಾಗೂ ಜ್ಯೋತಿಷಿ ಡಾ ಬಸವರಾಜ್ ಶೆಟ್ಟಿಗಾರ್, ರಂಗೋಲಿ ಕಲಾವಿದೆ ಡಾ ಭಾರತಿ ಮರವಂತೆ, ಉಡುಪಿ ಜಿ.ಪಂ ಮಾಜಿ ಸದಸ್ಯ ಎಸ್. ಮದನ್ ಕುಮಾರ್ ಉಪ್ಪುಂದ, ಗೌರವ ಸಲಹೆಗಾರ ಸಿ.ಎಸ್. ಖಾರ್ವಿ ಕೊಡೇರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ದೇವರಾಜ್ ಮರವಂತೆ ಭಾಗವತ ಬಳಗದ ವತಿಯಿಂದ ಪ್ರಸಂಗ ವಾಲಿಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಕೆರ್ಗಾಲ್ ಬನಗಲ್ ಹಾಡಿ ವನದುರ್ಗಾ ದೇವಿ ದೇವಸ್ಥಾನದ ಕಾರ್ಯದರ್ಶಿ ಗೋವಿಂದ ಎಮ್ ಮಟ್ನಕಟ್ಟೆ ಕಾರ್ಯಕ್ರಮ ನಿರೂಪಣೆಗೈಲಿದ್ದಾರೆ ಎಂದು ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದ ಧರ್ಮದರ್ಶಿ ತಿಮ್ಮ ವಿ ದೇವಾಡಿಗ ಪ್ರಕಟಣೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!