ಉಡುಪಿ: ನಿವೃತ್ತ ಇನ್ಸ್ಪೆಕ್ಟರ್ ಎಂ. ಜಯಂತ್ ಹೃದಯಾಘಾತದಿಂದ ನಿಧನ

Oplus_131072

ಉಡುಪಿ: ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್, ಮೂಲತಃ ಹೆಬ್ರಿಯ ನಿವಾಸಿ ಎಂ. ಜಯಂತ್ (61) ಅವರು‌ ಇಂದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

1992ರಲ್ಲಿ ಮಣಿಪಾಲ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡ ಜಯಂತ್ ಎಂ. ಅವರು ನಾಲ್ಕು ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು. ಮಹಿಳಾ ಠಾಣೆ, ಸಂಚಾರಿ ಠಾಣೆ, ಶಿರ್ವ ಕೊಲ್ಲೂರು,‌ ಉತ್ತರ ಕನ್ನಡ ಜಿಲ್ಲೆಯ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!