ಉಡುಪಿ: ಬಸ್ಸಿಗೆ ಬೈಕ್ ಢಿಕ್ಕಿ- ಗಾಯಾಳು ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ

Oplus_131072

ಉಡುಪಿ, ಆ.7: ನಿಂತಿದ್ದ ಬಸ್ಸಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಆ.5ರ ರಾತ್ರಿ ಉಡುಪಿ ಕಿನ್ನಿಮುಲ್ಕಿ ಎಂಬಲ್ಲಿ ನಡೆದಿದೆ.

ಮೃತರನ್ನು ನಿಟ್ಟೂರು ಪುತ್ತೂರು ಗ್ರಾಮದ ಎಲ್‌ವಿಟಿ ದೇವಳ ಸಮೀಪದ ನಿವಾಸಿ ತೇಜಸ್(22) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯ ಗೊಂಡ ಸಹಸವಾರ ಮೂಡುಬೆಳ್ಳೆಯ ವಿಠಲ್(25) ಎಂಬವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಿಬ್ಬರು ಕೆಲಸ ಮುಗಿಸಿ ಉಡುಪಿ ಜೋಡುಕಟ್ಟೆ ಕಡೆಯಿಂದ ಕಿನ್ನಿಮುಲ್ಕಿ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದು, ಈ ವೇಳೆ ಕಿನ್ನಿಮುಲ್ಕಿಯಲ್ಲಿ ಲಗೇಜ್ ತುಂಬಿಸಿ ಕೊಳ್ಳಲು ರಸ್ತೆ ಬದಿ ನಿಂತಿದ್ದ ಬೆಂಗಳೂರು ಬಸ್ಸಿಗೆ ಬೈಕ್ ಹಿಂದಿನಿಂದ ಢಿಕ್ಕಿ ಹೊಡೆಯಿ‌ ತ್ತೆನ್ನಲಾಗಿದೆ. ಇದರಿಂದ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದು, ಇದರಲ್ಲಿ ಗಂಭೀರವಾಗಿ ಗಾಯಗೊಂಡ ತೇಜಸ್ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿನ್ನಿಮೂಲ್ಕಿ ಸಹಿತ ಉಡುಪಿ ನಗರದಲ್ಲಿ ಬೆಂಗಳೂರು ಮತ್ತು ಮುಂಬಾಯಿಗೆ ತೆರಳುವ ಖಾಸಗಿ ಬಸ್‌ಗಳು ಬೇಕಾಬಿಟ್ಟಿ ನಿಲ್ಲಿಸಿ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡುತ್ತಿರುವುದಾಗಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯೂ‌ ಕೂಡ ಬಸ್ ಚಾಲಕ ಬಸ್‌ನನ್ನು ನೇರವಾಗಿ ನಿಲ್ಲಿಸದ ಪರಿಣಾದಿಂದ ಆಗಿದ್ದು, ಸ್ಥಳೀಯರು ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಚಾರಿ ಪೊಲೀಸರು ಈ ರೀತಿ ನಿಯಮ ಉಲ್ಲಂಘಿಸುವ ಬಸ್ ಚಾಲಕರಿಗೆ ದಂಡ ವಿಧಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!