ಕೋಟ: ಅಕ್ರಮ ಗಣಿಗಾರಿಕೆ ಆರೋಪ; ಓರ್ವನ ಬಂಧನ

ಕೋಟ: ಬೇಳೂರು ಗ್ರಾಮದ ಮೊಗೆಬೆಟ್ಟು ಎಂಬಲ್ಲಿ ಅಕ್ರಮ ಗಣಿಗಾರಿಕೆಗೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿ, ಹಿಟಾಚಿ, ಟಿಪ್ಪರ್ ಸಹಿತ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯಂತೆ ಕೋಟ ಪೊಲೀಸರು ದಾಳಿ ನಡೆಸಿದಾಗ ಬೇಳೂರಿನಿಂದ ನೂಜಿ ಕಡೆಗೆ ಹೋಗುವ ರಸ್ತೆಯ ಬಳಿಯಲ್ಲಿರುವ ಕೋರೆಯಲ್ಲಿ ಶಿಲೆ ಕಲ್ಲು ಒಡೆದು ಹಾಕಿ ಟಿಪ್ಪರ್ ಬಳಿ ರಾಶಿ ಹಾಕುತ್ತಿರುವುದು ಕಂಡು ಬಂದಿದೆ. ಹಿಟಾಚಿ ಚಾಲಕ ಸುರೇಶ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಹಿಟಾಚಿ, ಟಿಪ್ಪರ್ ಹಾಗೂ ಸುಮಾರು 10 ಟನ್ ಶಿಲೆ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊಗೆಬೆಟ್ಟುವಿನ ಸುರೇಶ ಮತ್ತು ಪ್ರತಾಪ ಎಂಬವರು ಈ ಕಲ್ಲುಕೋರೆಯಲ್ಲಿ ಅಕ್ರಮ ಕಲ್ಲು ತೆಗೆಯುವ ಕಾರ್ಯ ನಡೆಸುತ್ತಿದ್ದರೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!