ಕೊರಗ ಸಮುದಾಯದ ಪ್ರತಿಭಟನೆ 7ನೇ ದಿನಕ್ಕೆ- ಮಾಜಿ ಸಚಿವ ಸೊರಕೆ ಭೇಟಿ

ಉಡುಪಿ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಸಚಿವರು ವಿನಯ್ ಕುಮಾರ್ ಸೊರಕೆ ಇಂದು ಕೊರಗ ಜನಾಂಗದವರು ಹಲವಾರು ತಮ್ಮ ಬೇಡಿಕೆಯನ್ನು ಈಡೇರುಸುವಂತೆ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಸುತ್ತಿರುವ ಧರಣಿಯ ಸ್ಥಳಕ್ಕೆ ಭೇಟಿ ನೀಡ ಅವರ ಮನವಿ ಸ್ವೀಕರಿಸಿದರು.

ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಸ್ಥಳದಿಂದ ಕರೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು. ಹಾಗೂ ಮುಖ್ಯಮಂತ್ರಿ ಬಳಿ ನಿಯೋಗವನ್ನು ತೆಗೆದುಕೊಂಡು ಹೋಗುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ್ ಕೊಡವೂರು, ಪ್ರಸಾದ್ ಕಾಂಚನ್, ವೆರೋನಿಕಾ ಕಾರ್ನೆಲಿಯೋ, ರಮೇಶ್ ಕಾಂಚನ್, ಸುನೀತಾ ಶೆಟ್ಟಿ, ಹರೀಶ್ ಕಿಣಿ, ರೋಯ್ಸ್ ಉದ್ಯಾವರ, ರೋಶನಿ ಒಲಿವೆರಾ, ಸಂತೋಷ್ ಕುಲಾಲ್, ಸಂಧ್ಯಾ ತಿಲಕ್, ಮೀನಾಕ್ಷಿ ಮಾಧವ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!