ಇಂದ್ರಾಳಿ: ಸಂಗ್ರಹಿಸಿಟ್ಟ ತ್ಯಾಜ್ಯ ವಿಲೇವಾರಿಗೆ ಆಗ್ರಹ

ಉಡುಪಿ: ಇಂದ್ರಾಳಿ ರೈಲು ನಿಲ್ದಾಣ ವಠಾರದಲ್ಲಿ ತ್ಯಾಜ್ಯವನ್ನು ಸುಮಾರು ಒಂದು ಲಾರಿ ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ. ಇದು ಸುರಿಯುವ ಮಳೆಯಲ್ಲಿ ಕೊಳೆತು ನಾರುತ್ತಿದ್ದು, ಮಾರಕ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದ್ದಲ್ಲದೆ, ಪರಿಸರದಲ್ಲಿ ಡೆಂಗ್ಯೂ, ಮಲೇರಿಯಾ, ಚಿಕನ್ ಗೂನ್ಯ ಮೊದಲಾದ ಮಾರಕ ಜ್ವರ ಬಾಧೆಗಳು ಹರಡುವ ಭೀತಿ ಎದುರಾಗಿದೆ.

ತಕ್ಷಣ ಸಂಬಂಧಪಟ್ಟವರು ಇಲ್ಲಿರುವ ತ್ಯಾಜ್ಯ ರಾಶಿಗಳನ್ನು ವಿಲೇವಾರಿಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!