ಶಿರ್ವ: ಸ್ಕೂಟರ್‌ನಲ್ಲಿ ಸತ್ತ ನಾಯಿಯನ್ನು ಎಳೆದೊಯ್ದ ಸವಾರನ ವಿರುದ್ಧ ಪ್ರಕರಣ ದಾಖಲು

Oplus_131072

ಶಿರ್ವ, ಜು.20: ಸತ್ತ ನಾಯಿಯನ್ನು ಸ್ಕೂಟರ್‌ನ ಹಿಂಬದಿಗೆ ಹಗ್ಗದಿಂದ ಕಟ್ಟಿ ಎಳೆದುಕೊಂಡು ಹೋದ ಸವಾರನ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಂಬಗುಡ್ಡೆಯ ಅಬ್ದುಲ್ ಖಾದರ್ ಎಂಬಾತ ಜು.20ರಂದು ಸ್ಕೂಟರಿನ ಹಿಂಭಾಗಕ್ಕೆ ಸರಪಳಿಯ ಮೂಲಕ ನಾಯಿಯ ಕುತ್ತಿಗೆಗೆ ಕಟ್ಟಿ ಶಿರ್ವ ಗ್ರಾಪಂ ಕಚೇರಿಯ ಎದುರಿನ ರಸ್ತೆಯಲ್ಲಿ ಸವಾರಿ ಮಾಡಿ ಹಿಂಸಾತ್ಮಕವಾಗಿ ಎಳೆದು ಕೊಂಡು ಹೋಗಿದ್ದನು ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅದರಂತೆ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯೆ ಮಂಜುಳಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!