ಕುಂದಾಪುರ: ಶ್ರೀಮಾತಾ ಆಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ ಹೃದಯಾಘಾತದಿಂದ ನಿಧ‌ನ

Oplus_131072

ಕುಂದಾಪುರ: ಶ್ರೀಮಾತಾ ಆಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಇಂದು ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅವರು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮಾಲೀಕ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಹೆಂಡತಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ನನ್ನ ಹಾಡು ನನ್ನದು ಎಂಬ ಕಾರ್ಯಕ್ರಮದ ಮೂಲಕ ಕುಂದಾಪುರದ ಜನಮನ ಗೆದ್ದವರು ಕುಂದಾಪುರಕ್ಕೆ ಎಸ್ ಜಾನಕಿರಂತಹ ಮಹಾನ್ ಕಲಾವಿದರನ್ನು ಕರೆಸಿ ಅವರ ಮೂಲಕ ಸಂಗೀತ ಕಾರ್ಯಕ್ರಮವನ್ನು ಮಾಡಿಸಿರುವ ಹೆಗ್ಗಳಿಕೆ ಇವರದು. ಕೇವಲ ಸಂಗೀತಗಾರರಲ್ಲದೆ ಒಬ್ಬ ಚಿತ್ರಗಾರನಾಗಿಯೂ, ಮಾತ ಆಸ್ಪತ್ರೆಯ ಮಾಲಕರಾಗಿ ಅಷ್ಟೇ ಅಲ್ಲದೆ ಅನೇಕ ಕಿರು ಚಿತ್ರಗಳಲ್ಲಿ ನಟಿಸಿರುವಂತಹ ಹೆಗ್ಗಳಿಕೆ ಇವರದು.

Leave a Reply

Your email address will not be published. Required fields are marked *

error: Content is protected !!