ಬ್ರಹ್ಮಾವರ ತಹಶೀಲ್ದಾರ್‌ಗೆ ಬೆದರಿಕೆ ಕರೆ- ದೂರು ದಾಖಲು

ಕೋಟ, ಜು.10: ಬ್ರಹ್ಮಾವರ ತಹಶೀಲ್ದಾರ್‌ಗೆ ಮಹಿಳೆಯೊಬ್ಬರು ಬೆದರಿಕೆ ಕರೆ ಮಾಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಂಡೇಶ್ವರ ಗ್ರಾಮದ ಗಿರಿಜಾ ಮತ್ತು ಮಲ್ಲು ಎಂಬವರ ಮಧ್ಯೆ ಮಳೆ ನೀರು ಹರಿದು ಹೋಗುವ ಬಗ್ಗೆ ತಕರಾರು ಇದ್ದು, ಇದೇ ತಕರಾರಿಗೆ ಸಂಬಂಧಪಟ್ಟಂತೆ ಜು.8ರಂದು ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿ ಸ್ಥಳ ಪರಿಶೀಲನೆ ನಡೆಸಿ ಬಂದಿದ್ದರು. ಸಂಜೆ ವೇಳೆ ತಹಶೀಲ್ದಾರ್ ತಮ್ಮ ಕಚೇರಿಯಲ್ಲಿರುವಾಗ ಅವರ ಮೊಬೈಲ್‌ಗೆ ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ ಬೆದರಿಕೆಯೊಡ್ಡಿರುವುದಾಗಿ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!