ಎಮ್.ಸಿ.ಸಿ. ಬ್ಯಾಂಕ್ ವತಿಯಿಂದ ವಾಟರ್ ಪ್ಯೂರಿಫೈಯರ್ ಕೊಡುಗೆ

ಉಡುಪಿ: ಪರಿಸರ ದಿನಾಚರಣೆಯ ಪ್ರಯುಕ್ತ ಶಿರ್ವ ಡಾನ್ ಬೋಸ್ಕೋ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಇತ್ತೀಚಿಗೆ ಹಮ್ಮಿಕೊಳ್ಳುಲಾಯಿತು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರಿನ್ನು ಕುಡಿಯಬೇಕೆಂಬ ಉದ್ದೇಶದಿಂದ ಎಮ್.ಸಿ.ಸಿ. ಬ್ಯಾಂಕ್ ವತಿಯಿಂದ ನೀರು ಶುದ್ಧೀಕರಣ ಘಟಕ ವನ್ನು ಕೊಡುಗೆಯಾಗಿ ನೀಡಲಾಯಿತು.

ಇದರ ಉದ್ಧಾಟನೆ ಯನ್ನು ಬ್ಯಾಂಕಿನ ಹಿರಿಯ ಪ್ರಬಂಧಕರಾದ ಸಂದೀಪ್ ಕ್ವಾಡ್ರಸ್ ರವರು ಹಾಗೂ ಮುಖ್ಯ ಅತಿಥಿಗಳಾಗಿದ್ದ ಸಿಜೋಯ್ ತೋಮಸ್ ರವರು ನೆರೆವೇರಿಸಿದರು.

ಶಾಲಾ ಉಪಪ್ರಾಂಶುಪಾಲರಾದ ಐರಿನ್ ಕಾರ್ಡೋಜ, ಶಿರ್ವ ಶಾಖೆಯ ಪ್ರಬಂಧಕರಾದ ನೇವಿಲ್ ಡಿಸೋಜ ಹಾಗೂ ಸಿಬಂಧಿ ರಿತೇಶ್ ಡಿಸೋಜ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಲೆಯ ಪ್ರಾಂಶುಪಾಲರಾದ ಫಾ.ರೋಲ್ವಿನ್ ಜೋಯ್ ಅರಾನ್ನ ಸರ್ವರನ್ನು ಸ್ವಾಗತಿಸಿದರೆ, ಶಾಲಾ ವಿದ್ಯಾರ್ಥಿನಿ ಕು. ರಾಶಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!