ಮಂಗಳೂರಿಗೆ ಖತರ್‌ನಾಕ್ ‘ಚಡ್ಡಿ ಗ್ಯಾಂಗ್’ ಎಂಟ್ರಿ- ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ

ಮಂಗಳೂರು: ಶನಿವಾರ ರಾತ್ರಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಡಿಕಲ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ದುಷ್ಕರ್ಮಿಗಳು ನಿವಾಸಿಗಳು ಮಲಗಿದ್ದ ಕೊಠಡಿಯ ಕಿಟಕಿ ಗ್ರಿಲ್ ಕಟ್ ಮಾಡಿ ಮನೆಗೆ ನುಗ್ಗಲು ಯತ್ನಿಸಿದ್ದಾರೆ.

ಸಾರ್ವಜನಿಕರು ಜಾಗೃತರಾಗಿರಲು ಪೊಲೀಸರು ಮನವಿ ಮಾಡಿದ್ದಾರೆ. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಪ್ರದೇಶದಲ್ಲಿ ಅಥವಾ ಸಮೀಪದಲ್ಲಿ ಕಂಡುಬಂದರೆ, ನಿವಾಸಿಗಳು ಪೊಲೀಸ್ ನಿಯಂತ್ರಣ ಕೊಠಡಿಗೆ 9480802321 ಅಥವಾ 112 ಗೆ ಕರೆ ಮಾಡಲು ಕೋರಲಾಗಿದೆ.

ಮನೆಗಳು ಮತ್ತು ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸರು ನಿವಾಸಿಗಳಿಗೆ ಸಲಹೆ ನೀಡಿದ್ದು, ಬೆಳಗಿನ ಜಾವ ಎಲ್ಲ ಪ್ರದೇಶಗಳ ರಸ್ತೆಗಳಿಗೆ ಬಂದು ತಪ್ಪಿಸುವ ಹಾದಿಯನ್ನು ತಿಳಿದು ನಕ್ಷೆಯನ್ನು ತಯಾರು ಮಾಡುತ್ತಾರೆ. ನಗರ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಜನಸಾಮನ್ಯರು ಉತ್ತಮ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಆಯುಕ್ತರು ಮನವಿಮಾಡಿದ್ದಾರೆ.

ದಂಡುಪಾಳ್ಯ ಗ್ಯಾಂಗ್ ತರಹ ಇವರ ಕೃತ್ಯವಿದ್ದು ಇವರು ಹಣ ಚಿನ್ನಕ್ಕಾಗಿ ಹತ್ಯೆಮಾಡುವುದರಲ್ಲಿ ನಿಸ್ಸಿಮರೆಂದು ತಿಳಿದುಬಂದಿದೆ. ಅದರಿಂದ ಪೊಲೀಸ್ ಇಲಾಖೆ ಆದಷ್ಟು ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!