ಕುಂದಾಪುರ: ಮೆಣಸು ವ್ಯಾಪಾರಿಯ ಕಾರಿನಲ್ಲಿದ್ದ 4.5ಲಕ್ಷ ರೂ. ಕಳವು

ಸಾಂದರ್ಭಿಕ ಚಿತ್ರ

ಕುಂದಾಪುರ, ಮೇ 23: ಒಣ ಮೆಣಸು ವ್ಯಾಪಾರಿಯ ವಾಹನದಿಂದ 4.5 ಲಕ್ಷ ರೂ. ಕಳವುಗೈದ ಘಟನೆ ಸಿದ್ದಾಪುರ ಪೇಟೆಯಲ್ಲಿ ನಡೆದಿದೆ.

ಹಾವೇರಿ ಮೂಲದ ಮುಹಮ್ಮದ್ ರಫಿ(43) ಹಣ ಕಳೆದುಕೊಂಡ ವ್ಯಾಪಾರಿ. ಇವರು ಬ್ರಹ್ಮಾವರದ ಸಂತೆಯಲ್ಲಿ ಒಣ ಮೆಣಸು ವ್ಯಾಪಾರ ಮುಗಿಸಿ ತನ್ನ ಕೆಲಸದವರೊಂದಿಗೆ ವಾಹನದಲ್ಲಿ ವಾಪಸ್ ಊರಿಗೆ ಹೊರಟಿದ್ದರು. ದಾರಿಮಧ್ಯೆ ರಾತ್ರಿ ಊಟ ಮಾಡುವ ಸಲುವಾಗಿ ಸಿದ್ದಾಪುರ ಪೇಟೆಯಲ್ಲಿನ ಹೋಟೆಲ್ ಬಳಿ ವಾಹನವನ್ನು ನಿಲ್ಲಿಸಿ ತೆರಳಿದ್ದರು. ಈ ವೇಳೆ ಇಬ್ಬರು ಅಪರಿಚಿತರು ವಾಹನದ ಹಿಂದುಗಡೆ ಇರಿಸಿದ್ದ 4,50,000 ರೂ.ವನ್ನು ಕಳವುಗೈದು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!