ಉಡುಪಿ: “ಗೀತಾಂಜಲಿ ಸಿಲ್ಕ್ಸ್”ನ ಸಂಸ್ಥಾಪಕ ನೀರೆಬೈಲೂರು ಗೋವಿಂದ ನಾಯಕ್ ನಿಧನ

Oplus_131072

ಉಡುಪಿ, ಮೇ.19(ಉಡುಪಿ ಟೈಮ್ಸ್ ವರದಿ): ಉಡುಪಿಯ ಹೆಸರಾಂತ ಜವಳಿ ಮಳಿಗೆ “ಗೀತಾಂಜಲಿ ಸಿಲ್ಕ್ಸ್‌” ಮತ್ತು “ಶಾಂತಿಸಾಗರ್” ಹೊಟೇಲ್‌ನ ಸಂಸ್ಥಾಪಕರಾದ ನೀರೆಬೈಲೂರು ಗೋವಿಂದ ನಾಯಕ್ (89) ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಐವರು ಪುತ್ರರು, ಓರ್ವ ಪುತ್ರಿ ಸಹಿತ ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಸಹಿತ ಅಪಾರ ಬಂಧುಬಳಗ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 5 ಗಂಟೆಗೆ ಕಾರ್ಕಳ ನೀರೆಬೈಲೂರಿನ ಸ್ವಗೃಹದಲ್ಲಿ ನಡೆಯಲಿದೆಂದು ಕುಟುಂಬ ಮೂಲಗಳು ತಿಳಿಸಿವೆ.

ಇಂದು ಸಂಸ್ಥೆಗಳಿಗೆ ರಜೆ….

ಸಂಸ್ಥಾಪಕರ ನಿಧನ ಹಿನ್ನೆಲೆಯಲ್ಲಿ ಉಡುಪಿಯ ಗೀತಾಂಜಿ ಸಿಲ್ಕ್ಸ್, ನ್ಯೂ ಶಾಂತಿ ಸಾಗರ್ ರೆಸ್ಟೋರೆಂಟ್, ಶಾಂತಿ ಸಾಗರ್, ಮಣಿಪಾಲದ ಶ್ರೀಶಾಂತಿ ಸಾಗರ್ ಹೊಟೇಲ್‌ಗಳಿಗೆ ರಜೆ ಸಾರಲಾಗಿದ್ದು, ಗ್ರಾಹಕರು ಸಹಕರಿಸುವಂತೆ ಆಡಳಿತ ಮಂಡಳಿ ವಿನಂತಿಸಿದೆ.

Leave a Reply

Your email address will not be published. Required fields are marked *

error: Content is protected !!