ಬ್ರಹ್ಮಾವರ: ಲಾರಿ ಸಹಿತ 1.21ಕೋಟಿ ರೂ. ಮೌಲ್ಯದ ಗೊಡಂಬಿ ವಂಚನೆ

ಬ್ರಹ್ಮಾವರ, ಎ.6: ಬ್ರಹ್ಮಾವರದಿಂದ ಗುಜರಾತ್‌ಗೆ ಲಾರಿಯಲ್ಲಿ ಲೋಡ್ ಮಾಡಿ ಕಳುಹಿಸಲಾದ ಕೋಟ್ಯಂತರ ರೂ. ಮೌಲ್ಯದ ಗೋಡಂಬಿಯನ್ನು ಆರೋಪಿಗಳು ಸಂಬಂಧಪಟ್ಟವರಿಗೆ ತಲುಪಿಸದೇ ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನಂಜೆಯ ಮೋಹನ ದಾಸ್ ಎಂಬವರ ಮಾಲಕತ್ವದ ಶ್ರೀಕೃಷ್ಣ ಕ್ಯಾಶೋ ಫ್ಯಾಕ್ಟರಿಯಿಂದ ಎ.2ರಂದು ಮೊದನ್ ಮೋಸಿನ್ ಎಂಬವರ ಲಾರಿಯಲ್ಲಿ ಗೋಡಂಬಿಯನ್ನು ಸೂರತ್‌ನ ಟ್ರೇಡರ್ಸ್‌ಗೆ 21.24 ಟನ್ ಹಾಗೂ ಅಲಹಾಬಾದ್‌ ನ ಟ್ರೇಡರ್ಸ್‌ಗೆ 3.450 ಟನ್ ಗೋಂಡಬಿಯನ್ನು ಲೋಡ್ ಮಾಡಿ ಲಾರಿಯ ಚಾಲಕ ರಂಜಾನ್ ಸೋದ ಮತ್ತು ಮಹೇಂದ್ರಪುರಿ ಗುಶೈ ಅವರ ಜೊತೆಯಲ್ಲಿ ಸೂರತ್‌ಗೆ ಕಳುಹಿಸಲಾಗಿತ್ತು.

ಆದರೆ ಎ.5ರಂದು ಬೆಳಿಗ್ಗೆ ಸೂರತ್ ಮತ್ತು ಅಹ್ಮದಾಬಾದ್ ನಲ್ಲಿರುವ ಟ್ರಡರ್ಸ್‌ಗೆ ತಲುಪಬೇಕಾಗಿದ್ದ ಸೊತ್ತು ಮತ್ತು ಲಾರಿಯು ತಲುಪಿಸದ ಬಗ್ಗೆ ಮಾಹಿತಿ ದೊರೆತಿತ್ತು. ಆರೋಪಿಗಳು 1,21,76,598 ರೂ ಮೌಲ್ಯದ 24.69 ಮೆಟ್ರಿಕ್ ಟನ್ ಗೋಡಂಬಿಯನ್ನು ತಲುಪಿಸಬೇಕಾದವರಿಗೆ ತಲುಪಿಸದೇ ವಂಚನೆ ಮಾಡಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!