ತ್ರಿಷಾ ಕಾಲೇಜಿನಲ್ಲಿ ನಿರಂತರ ರಾಜಕೀಯ- ಪ್ರಶಾಂತ್ ಜತ್ತನ್ನ

ಕಟಪಾಡಿ : ಇಲ್ಲಿಯ ತ್ರಿಷಾ ಕಾಲೇಜು ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ನಿರಂತರ ರಾಜಕೀಯ ಮಾಡುತ್ತಿದೆ. ತ್ರಿಷಾ ಕಾಲೇಜು ನಿರಂತರ ಕೇವಲ ಒಂದು ಪಕ್ಷಕ್ಕೆ ಬೆಂಬಲ ನೀಡುತ್ತ ಕಾಲೇಜಿನ ಒಳಗೆ ರಾಜಕೀಯ ಮಾಡುತ್ತಿದೆ. ಕಳೆದ ಚುನಾವಣಾ ಸಮಯದಲ್ಲಿ ಅಣ್ಣಾಮಲೈ ಅವರನ್ನು ಕರೆಸಿ ರಾಜಕೀಯ ಮಾಡಲಾಗಿತ್ತು. ಈ ಚುನಾವಣೆಯಲ್ಲಿ ಚುನಾವಣ ಪ್ರಚಾರ ಮಾಡಲು ಮೈಕ್ ಕೊಟ್ಟು ಚುನಾವಣ ಪ್ರಚಾರ ಮಾಡಲಾಗಿದೆ ಇದು ಖಂಡನೀಯ ಎಂದು ಕೋಟೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿರುವ ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ.

ಮಕ್ಕಳನ್ನು ನಿಮ್ಮ ಕಾಲೇಜಿಗೆ ಕಳಿಸುವುದು ಅವರು ಓದಿ ತಂದೆ ತಾಯಿಗೆ ಮನೆಯವರಿಗೆ ಆಧಾರವಾಗಲಿ ಎಂದು. ಆದರೆ ತ್ರಿಷಾ ಕಾಲೇಜಿನವರು ಮಕ್ಕಳನ್ನು ರಾಜಕೀಯಕ್ಕೆ ದೂಡುತ್ತಿದ್ದಾರೆ. ಹೆತ್ತವರು ಈಗಲೇ ಎಚ್ಚರಗೊಳ್ಳದಿದ್ದರೆ ಈ ಕಾಲೇಜಿನವರು ನಿಮ್ಮ ಮಕ್ಕಳ ಭವಿಷ್ಯದಲ್ಲಿ ರಾಜಕೀಯದ ಚೆಲ್ಲಾಟವಾಡಲಿದ್ದಾರೆ ಎಂದು ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!