ನಿಮ್ಮ ಅಧಿಕಾರದ ಬಗ್ಗೆಯೇ ಗ್ಯಾರಂಟಿ ಇಲ್ಲ, ಇನ್ನು ಜನತೆಗೆ ಯಾವ ಗ್ಯಾರಂಟಿ‌ ಕೊಡುತ್ತೀರಿ? ಸಿಎಂ ಸಿದ್ದರಾಮಯ್ಯನವರೇ?

ಸಿದ್ದರಾಮಯ್ಯನವರು ವರುಣಾದಲ್ಲಿ ನೀಡಿದ ಹೇಳಿಕೆ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ಸುನಿಲ್ ಕುಮಾರ್ ಅವರ ಪ್ರತಿಕ್ರಿಯೆ ನೀಡಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಅರವತ್ತು ಸಾವಿರ ಮತ ಲೀಡ್ ನೀಡದೇ ಇದ್ದರೆ ತಾವು ಅಧಿಕಾರ ಕಳೆದುಕೊಳ್ಳ ಬೇಕಾಗುತ್ತದೆ ಎಂದು ಮತದಾರರ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಡಿಕೊಂಡಿದ್ದಾರೆ.
ಸ್ವಕ್ಷೇತ್ರದ ಜನರ ಮುಂದೆ ಜನಪ್ರತಿನಿಧಿ ಹೆಚ್ಚಿನ ಮತ ಕೊಡಿ ಎನ್ನುವುದು ತಪ್ಪಲ್ಲ. ಆದರೆ ಸಿದ್ದರಾಮಯ್ಯ ಅಧಿಕಾರ ಕೈ ತಪ್ಪುವ ಭೀತಿಯನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ. ಬಹುಮತದ ಸರ್ಕಾರದ ಮುಖ್ಯಮಂತ್ರಿ ಯಾರ ಭಯಕ್ಕೆ ಈ ಮಾತು ಹೇಳಿದ್ದಾರೆಂಬುದು ಕರ್ನಾಟಕದ ಜನತೆ ಗೊತ್ತಾಗಬೇಕು.

ಸಿದ್ದರಾಮಯ್ಯನವರೇ ನಿಮಗೆ ಯಾರ ಭಯ? ಹೈಕಮಾಂಡ್‌ನದೋ, ಡಿ.ಕೆ.ಶಿವಕುಮಾರ್ ಅವರದ್ದೋ? ಅಥವಾ ಶಾಸಕರದ್ದೋ?
ನಿಮಗೆ ನಿಮ್ಮ ಅಧಿಕಾರದ ಬಗ್ಗೆಯೇ ಗ್ಯಾರಂಟಿ ಇಲ್ಲ, ಇನ್ನು ಜನತೆಗೆ ಯಾವ ಗ್ಯಾರಂಟಿ‌ ಕೊಡುತ್ತೀರಿ ? ನಾಡಿಗೆ ಸ್ಪಷ್ಟಪಡಿಸಿ.

Leave a Reply

Your email address will not be published. Required fields are marked *

error: Content is protected !!