ಬ್ರಹ್ಮಾವರ: ತಿಥಿಯ ಪೂಜೆ ನೀಡದಕ್ಕೆ ಮನೆಗೆ ಹೋಗಿ ಬೆದರಿಕೆ ಹಾಕಿದ್ದ ಅರ್ಚಕನ ವಿರುದ್ಧ ದೂರು

ಬ್ರಹ್ಮಾವರ ಮಾ.9(ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರದ ಹೊಸೂರು ಗ್ರಾಮದಲ್ಲಿ ಮೃತರ ಕಾರ್ಯದ ಪೂಜಾ ಕಾರ್ಯದ ವೇಳೆ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹೊಸೂರು ಗ್ರಾಮದ ರಾಘವೆಂದ್ರ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅವರ ತಾಯಿ ರಾಧಾ ಬಾಯಿಯವರು ಮೃತಪಟ್ಟ ಬಗ್ಗೆ ಮಾ.6 ರಂದು ಮನೆಯಲ್ಲಿ ನಡೆಯುವ ತಾಯಿಯ ಕಾರ್ಯದ ಪೂಜಾ ಕಾರ್ಯವನ್ನು ನಡೆಸುತ್ತಿದ್ದರು. ಈ ವೇಳೆ ಪೂಜಾ ಕಾರ್ಯವನ್ನು ಸ್ಥಳೀಯ ಅರ್ಚಕ ರಾಮಕೃಷ್ಣ ಅವರಿಗೆ ನೀಡದೇ ಬೇರೆ ಪುರೋಹಿತರಿಂದ ಮಾಡಿಸುತ್ತಿದ್ದ ಕಾರಣ ಮಧ್ಯಾಹ್ನದ ವೇಳೆ ರಾಮಕೃಷ್ಣ ಅವರು ಏಕಾಏಕಿ ಮನೆಯ ಅಂಗಳಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ, ಅವಾಚ್ಯ ಶಬ್ಧಗಳಿಂದ ಜಾತಿ ನಿಂದನೆ ಮಾಡಿರುವುದಲ್ಲದೇ, ಇಡಿ ಸಂತಾನ ಸರ್ವನಾಶ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!