ಸಿಎಂ ಖಾತೆಯಿಂದ ಹಣ ದೋಚಲು ಯತ್ನ- ಮಂಗಳೂರಿನ ಸಿನಿಮಾ ನಿರ್ದೇಶಕ ಸೇರಿ 6 ಮಂದಿ ಬಂಧನ

ಮಂಗಳೂರು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಖಾತೆಗೆ ಕನ್ನ ಹಾಕಲು ಹೋದ ಕರಾವಳಿ​ ನಿರ್ದೇಶಕ ಉದಯ್ ಕುಮಾರ್ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ನಿರ್ದೇಶಕ ಉದಯ ಶೆಟ್ಟಿ ಕಾಂತಾವರ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಬಂಧಿತ ಆರೋಪಿಗಳು. 

ಈ ಖದೀಮರ ತಂಡ ನಕಲಿ ಚೆಕ್ ಬಳಕೆ ಮಾಡಿಕೊಂಡು ಹಣ ವಿತ್​ ಡ್ರಾ ಮಾಡಲು ಮುಂದಾಗಿತ್ತು. ಅದೂ ಸಾವಿರ, ಲಕ್ಷ ರೂಪಾಯಿ ಅಲ್ಲ. ಬರೋಬ್ಬರಿ 52 ಕೋಟಿ ರೂಪಾಯಿ! ಈ ತಂಡ ಫೇಕ್​ ಚೆಕ್​ ಸೃಷ್ಟಿ ಮಾಡಿತ್ತು. ಆಂಧ್ರ ಸಿಎಂ ರಿಲೀಫ್​ ಫಂಡ್​ ನೀಡಿದ ಚೆಕ್​ ಇದು ಎಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಬ್ಯಾಂಕ್​ನಲ್ಲಿ ಡ್ರಾ ಮಾಡಲು ಮುಂದಾಗಿತ್ತು.

ಆಂಧ್ರ ಸಿಎಂ ರಿಲೀಫ್​ ಫಂಡ್​ನಿಂದ 58 ಕೋಟಿ ರೂಪಾಯಿ ವಿತ್  ​ಡ್ರಾ ಆಗುತ್ತಿದೆ ಎನ್ನುವ ವಿಚಾರ ಬ್ಯಾಂಕ್​ನವರಿಗೆ ಸಾಕಷ್ಟು ಅನುಮಾನ ಮೂಡಿಸಿತ್ತು. ಈ ಬಗ್ಗೆ ಬ್ಯಾಂಕ್​ ಮ್ಯಾನೇಜರ್​ ಆಂಧ್ರ ಸರ್ಕಾರದ ಜೊತೆ ಮಾತನಾಡಿದ್ದರು. ಈ ವೇಳೆ ಅಷ್ಟು ಮೊತ್ತದ ಚೆಕ್ ಕೊಟ್ಟಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿತ್ತು. ಈ ವೇಳೆ ಬ್ಯಾಂಕ್​ ಮ್ಯಾನೇಜರ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಇವರನ್ನು ಬಂಧಿಸಲಾಗಿದೆ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈ  ಸಂಬಂಧ ತನಿಖೆಗೆ ಆಗ್ರಹಿಸಿದೆ. ಇದುವರೆಗೆ 117 ಕೋಟಿ ರು ವಂಚನೆಯಾಗಿರುವುದು ಪತ್ತೆಯಾಗಿದೆ..

Leave a Reply

Your email address will not be published. Required fields are marked *

error: Content is protected !!