ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಉದ್ಯಮಿ ಡೇನಿಯಲ್ ರೇಂಜರ್ ನೇಮಕ
ಉಡುಪಿ: ಆಮ್ ಆದ್ಮಿ ಪಾರ್ಟಿಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಉದ್ಯಮಿ ಡೇನಿಯಲ್ ರೇಂಜರ್, ಪ್ರಧಾನ ಕಾರ್ಯದರ್ಶಿ ಪ್ರದೇಶ್ ಪಿ., ಸಂಘಟನಾ ಕಾರ್ಯದರ್ಶಿ ಜೈಕಿಶಾನ್ ಪೂಜಾರಿ ಹಾಗೂ ಸುಬ್ರಮಣ್ಯ ಉಡುಪ ಅವರನ್ನು ರಾಜ್ಯ ಘಟಕವು ಆಯ್ಕೆ ಮಾಡಿದೆ.
ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮುಖ್ಯ ಮಂತ್ರಿ ಚಂದ್ರು ಅವರು ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಮಾಡಿದ್ದಾರೆ.
ಅದೇ ರೀತಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ವಿವೇಕಾನಂದ ಸಾಲಿನ್ಸ್ ಅವರನ್ನು ನೇಮಕ ಗೊಳಿಸಿದ್ದಾರೆ.