ಕಲಬುರ್ಗಿ: ಕೊಲೆ ಆರೋಪಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಕಲಬುರ್ಗಿ: ವಲಸೆ ಕಾರ್ಮಿಕನನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಕುಖ್ಯಾತ ದರೋಡೆಕೋರನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಹೊರವಲಯದ ಸುಲ್ತಾನಪುರ ಬಳಿ ಈ ಘಟನೆ ನಡೆದಿದ್ದು, ಮೆಹಬೂಬ್ ನಗರ ನಿವಾಸಿ ಮುಬಿನ್ ಅಲಿಯಾಸ್ ಅಬ್ದುಲ್ ರೆಹಮಾನ್ (25) ಮೇಲೆ ಕಲಬುರಗಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಸೋಮಲಿಂಗ್ ಗುಂಡು ಹಾರಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ವಲಸೆ ಕಾರ್ಮಿಕನ ಮೊಬೈಲ್  ಕಿತ್ತುಕೊಳ್ಳಲು ಹೋಗಿ ಆರೋಪಿ ಮುದೀನ್ ಆತನನ್ನು ಕೊಲೆ ಮಾಡಿದ್ದ.   

ಕಳೆದ ರಾತ್ರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಮುಬಿನ್ ನನ್ನು ಬಂಧಿಸಿದ್ದ ಗ್ರಾಮೀಣ ಠಾಣೆ ಪೊಲೀಸರು ಬೆಳಿಗ್ಗೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ಕರೆದೊಯ್ದಿದ್ದರು.ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ‌ಹೋಗಲು ಯತ್ನಿಸಿದ‌ ಮುಬಿನ್ ಕಾಲಿಗೆ ಗ್ರಾಮೀಣ ಠಾಣೆ ಪೊಲೀಸ್  ಇನ್ ಸ್ಪೆಕ್ಟರ್  ಸೋಮಲಿಂಗ ಕಿರದಳ್ಳಿ ಗುಂಡು ಹಾರಿಸಿದರು. ಆರೋಪಿ ಹಲ್ಲೆಗೆ ಯತ್ನಿಸಿದ್ದರಿಂದ ಇಬ್ಬರು ಪೊಲೀಸ್ ಕಾನ್ ಸ್ಟೆಬಲ್ ಗಳಿಗೆ ಗಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!