ಕಾಂಗ್ರೆಸ್ ಅಧಿಕಾರಕ್ಕೆ ಬಂತು, ಎಲ್ಲವೂ ಹೋಯ್ತು.! – ಬಿಜೆಪಿ ವ್ಯಂಗ್ಯ

ಬೆಂಗಳೂರು, ಸೆ 27: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು, ಎಲ್ಲವೂ ಹೋಯ್ತು ಎಂದು ಟ್ವೀಟ್​ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂತು ಕಾವೇರಿ ಹೋಯ್ತು. ಕಾಂಗ್ರೆಸ್‌ ಬಂತು ಅಭಿವೃದ್ಧಿ ಹೋಯ್ತು, ಆರ್ಥಿಕತೆ ಹೋಯ್ತು, ರಾಜ್ಯದಲ್ಲಿ ಕಾಂಗ್ರೆಸ್‌ ಬಂತು ಕರ್ನಾಟಕದ ಆಸ್ಮಿತೆ ಹೋಯ್ತು. ಮಹದಾಯಿ ಹೋಯ್ತು, ಭದ್ರಾ ಮೇಲ್ದಂಡೆ ಅನ್ನಭಾಗ್ಯ,ಕಿಸಾನ್‌ ಸಮ್ಮಾನ್ ರೈತ ಮಕ್ಕಳ ವಿದ್ಯಾನಿಧಿ ಎಂದು ಟ್ವೀಟ್​ ಮೂಲಕ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.ಕಾಂಗ್ರೆಸ್‌ ಬಂದಿದೆ ಜನತೆಯ ಬದುಕು ದುಸ್ತರವಾಗಿದೆ ಎಂದಿದ್ದು, ಮತ್ತೊಂದು ಟ್ವೀಟ್ ನಲ್ಲಿ ಕಾವೇರಿ ಎಂದೆಂದಿಗೂ ನಮ್ಮದು, ತಮ್ಮ ವೈಯಕ್ತಿಕ ಸ್ನೇಹವನ್ನು ಕಾಪಾಡಿಕೊಳ್ಳಲು, ರಾಜ್ಯದ ಜನತೆಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ‌ ಎಂದು ಹರಿಹಾಯ್ದಿದೆ.

ರಾಜ್ಯದಲ್ಲಿ @INCKarnataka ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು..!

ಕಾಂಗ್ರೆಸ್‌ ಬಂತು ಕಾವೇರಿ ಹೋಯ್ತು..!

ಕಾಂಗ್ರೆಸ್‌ ಬಂತು ಅಭಿವೃದ್ಧಿ ಹೋಯ್ತು..!

ಕಾಂಗ್ರೆಸ್‌ ಬಂತು ಆರ್ಥಿಕತೆ ಹೋಯ್ತು..!

ಕಾಂಗ್ರೆಸ್‌ ಬಂತು ಕರ್ನಾಟಕದ ಆಸ್ಮಿತೆ ಹೋಯ್ತು..!

ಕಾಂಗ್ರೆಸ್‌ ಬಂತು ಮಹದಾಯಿ ಹೋಯ್ತು..!

ಕಾಂಗ್ರೆಸ್‌ ಬಂತು ಭದ್ರಾ ಮೇಲ್ದಂಡೆ ಹೋಯ್ತು..!

ಕಾಂಗ್ರೆಸ್‌ ಬಂತು ಅನ್ನಭಾಗ್ಯ ಹೋಯ್ತು..!

✖️

ಕಾಂಗ್ರೆಸ್‌ ಬಂತು ಕಿಸಾನ್‌ ಸಮ್ಮಾನ್ ಹೋಯ್ತು..!

✖️

ಕಾಂಗ್ರೆಸ್‌ ಬಂತು ರೈತ ಮಕ್ಕಳ ವಿದ್ಯಾನಿಧಿ ಹೋಯ್ತು..! ಕಾಂಗ್ರೆಸ್‌ ಬಂದಿದೆ ಜನತೆಯ ಬದುಕು ದುಸ್ತರವಾಗಿದೆ..!

Leave a Reply

Your email address will not be published. Required fields are marked *

error: Content is protected !!