ಜೆಸಿಐ ಗಣೇಶಪುರ: ಕಾರು ರ‍್ಯಾಲಿ ಮತ್ತು ಜೆಸಿ ಸಪ್ತಾಹದ ಸಮಾರೋಪ ಸಮಾರಂಭ

ಮಂಗಳೂರು: ಜೆಸಿ ಸಪ್ತಾಹದ ಅಂಗವಾಗಿ, ಜೆಸಿಐ ಗಣೇಶಪುರವು 6 ದಿನಗಳ ಕಾಲ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ, 7 ನೇ ದಿನದಂದು ಭವ್ಯವಾದ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಜೆಸಿಐ ಗಣೇಶಪುರದ ಎಲ್ಲ ಸದಸ್ಯರು ಅದ್ದೂರಿಯಾದ ಕಾರು ರ‍್ಯಾಲಿ ಮುಖಾಂತರ ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿದರು.

ಜೆಸಿಐ ಗಣೇಶಪುರವು ಈ ಆರು ದಿನಗಳಲ್ಲಿ ಎಂಡಿಎಸ್ ಕಾಲೇಜಿನಲ್ಲಿ ಆರೋಗ್ಯ ಶಿಬಿರ, ಆಶಾಕಿರಣ ಟ್ರಸ್ಟ್ ಕೃಷ್ಣಾಪುರಕ್ಕೆ ವೈದ್ಯಕೀಯ ಉಪಕರಣ ಮತ್ತು ಆಹಾರ ಸಾಮಗ್ರಿ ವಿತರಣೆ, ಕಾಳಾವರದಲ್ಲಿ ನೀರು ಶುದ್ಧೀಕರಣ ಯಂತ್ರಗಳ ಕೊಡುಗೆ, ನೀರು ಉಪಯೋಗಿಸುವ 100ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಜಲಸಂರಕ್ಷಣಾ ಸ್ಟಿಕ್ಕರ್ ಅಳವಡಿಕೆ, ರಸ್ತೆ ಮಾರ್ಗಸೂಚಿ ಫಲಕಗಳ ಅಳವಡಿಕೆ, ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಕಿರುಚಿತ್ರವನ್ನು ಪ್ರದರ್ಶಿಸುವುದು, ಬಾಲ ಸಂರಕ್ಷಣಾ ಕೇಂದ್ರ ಕುತ್ತಾರ್‌ನಲ್ಲಿ ಮಕ್ಕಳಿಗೆ ಭೋಜನ ನೀಡುವುದು, B2B ಮಲ್ಟಿ LO ಸಭೆಯಲ್ಲಿ ಭಾಗವಹಿಸುವಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜೆಸಿಐ ಗಣೇಶಪುರದ ಸದಸ್ಯರ ವ್ಯವಹಾರಗಳ ಜಾಹೀರಾತನ್ನು ಪ್ರದರ್ಶಿಸುವಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಿತು.

Leave a Reply

Your email address will not be published. Required fields are marked *

error: Content is protected !!