ಜೆಸಿಐ ಗಣೇಶಪುರ: ಸಾಧಕರಿಗೆ ಸನ್ಮಾನ

ಮಂಗಳೂರು: JCI ಗಣೇಶಪುರದ EPS, CAPP ಮತ್ತು ಯುವಜನತೆಗೆ ಸಬಲೀಕರಣದಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ವಲಯ 15ರ ಮಧ್ಯಂತರ ಸಮ್ಮೇಳನ ಮತ್ತು JJC ಸಮ್ಮೇಳನದಲ್ಲಿ ಪರಿಣಾಮಕಾರಿ ಸಾರ್ವಜನಿಕ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗೆದ್ದು ಜೆಸಿಐ ಗಣೇಶಪುರಕ್ಕೆ ಕೀರ್ತಿ ತಂದುದ್ದಲ್ಲದೆ, ಶಿಕ್ಷಣ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆಗಾಗಿ JJC ಪ್ರೇಕ್ಷಾ ಅವರನ್ನು ಸನ್ಮಾನಿಸಲಾಯಿತು.

ಜೆಸಿಐ ಗಣೇಶಪುರವು ಉಷಾ ಭಂಡಾರಿ ಅವರ ಸುದೀರ್ಘ 13 ವರ್ಷಗಳ ವೈದ್ಯಕೀಯ ಸೇವೆಗಾಗಿ, ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಅವರ ಗಮನಾರ್ಹ ಕೊಡುಗೆಗಳಿಗಾಗಿ ಸನ್ಮಾನಿಸಲಾಯಿತು. ಉಷಾ ಬಂಡಾರಿ ಅವರ ಸನ್ಮಾನ ಸಮಾರಂಭದಲ್ಲಿ ಜೆಸಿಐ ಗಣೇಶಪುರದ ಅಧ್ಯಕ್ಷ ಜೆಸಿ ಸನತ್ ಕುಮಾರ್ ನಾಯ್ಕ್, ಪೂರ್ವ ಅಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!