ಕಾಪು: ವ್ಯಾಪಾರ ಇಲ್ಲದೆ ಅಂಗಡಿ ಮಾರಾಟದ ಚಿಂತೆಯಲ್ಲಿ ಆತ್ಮಹತ್ಯೆ

ಕಾಪು, ಸೆ.14: ವ್ಯಾಪಾರ ಇಲ್ಲದ ಕಾರಣ ಅಂಗಡಿ ಮಾರಾಟ ಮಾಡಿದ ಚಿಂತೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.13ರಂದು ರಾತ್ರಿ ವೇಳೆ ಕಾಪು ಲೈಟ್ ಹೌಸ್ ಬಳಿಯ ಬೈರಗುತ್ತುತೋಟ ಎಂಬಲ್ಲಿ ನಡೆದಿದೆ.

ಮೃತರನ್ನು ಬೈರಗುತ್ತುತೋಟದ ಭಾಸ್ಕರ ಕರ್ಕೆರಾ(39) ಎಂದು ಗುರುತಿಸಲಾಗಿದೆ. ಕಾಪುವಿನಲ್ಲಿ ಚಪ್ಪಲಿ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡಿಕೊಂಡಿದ್ದ ಇವರು, ವ್ಯಾಪಾರ ಸರಿಯಾಗಿ ಆಗದ ಕಾರಣ ಅಂಗಡಿಯನ್ನು ಮಾರಾಟ ಮಾಡಿದ್ದರು. ಬಳಿಕ ಸುಮಾರು ಎಂಟು ತಿಂಗಳಿನಿಂದ ಕೆಲಸವಿಲ್ಲದೇ ಮನೆಯಲ್ಲಿದ್ದ ಇವರು, ಇದೇ ಚಿಂತೆಯಲ್ಲಿ ಮನನೊಂದು ಮನೆಯಲ್ಲಿ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡಿ ದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!