ಉಡುಪಿ ರಂಗಭೂಮಿಯ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರ್ ಆಯ್ಕೆ

ಉಡುಪಿ : ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ರಂಗಭೂಮಿ (ರಿ.) ಉಡುಪಿಯ 58ನೇ ವಾರ್ಷಿಕ ಮಹಾ ಸಭೆಯು ನಗರದ ಡಯಾನಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

2023 24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಂಗಭೂಮಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರ್ ಆಯ್ಕೆಗೊಂಡರು.

ಸಂಸ್ಥೆಯ ಗೌರವಾಧ್ಯಕ್ಷರಾಗಿ ಡಾ. ಎಚ್. ಎಸ್ ಬಳ್ಳಾಲ್ ಮಾರ್ಗದರ್ಶಕರಾಗಿ ಡಾ.ಎಚ್. ಶಾಂತರಾಮ್, ಉಪಾಧ್ಯಕ್ಷರಾಗಿ ಭಾಸ್ಕರ್ ರಾವ್ ಕಿದಿಯೂರು ಹಾಗೂ ಎನ್ ರಾಜ ಗೋಪಾಲ ಬಳ್ಳಾಲ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಪಾದ ಹೆಗಡೆ ಹಾಗೂ ವಿವೇಕಾನಂದ ಎನ್ ಕೋಶಾಧಿಕಾರಿಯಾಗಿ ಭೋಜ ಯು ಆಯ್ಕೆಯಾದರು.

ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಪೂರ್ಣಿಮಾ ಸುರೇಶ್, ಭುವನ ಪ್ರಸಾದ್ ಹೆಗ್ಡೆ, ವಿದ್ಯಾವಂತ ಆಚಾರ್ಯ, ಎಚ್. ಜಯಪ್ರಕಾಶ್ ಕೆದ್ಲಾಯ ರವೀಂದ್ರ ಕೆ. ಶೆಟ್ಟಿ ಕಡೆಕಾರು, ಆನಂದ ಮೇಲಾoಟ, ಡಾ. ವಿಷ್ಣುಮೂರ್ತಿ ಪ್ರಭು, ಅಮಿತಾಂಚಲಿ ಕಿರಣ್, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಹರೀಶ್ ಜಿ. ಕಲ್ಮಾಡಿ, ಕೆ ರಾಘವೇಂದ್ರ ಆಚಾರ್ಯ ಕಾರ್ತಿಕ್ ಪ್ರಭು ಆಯ್ಕೆಯಾದರು.

💥💥ನಕಲಿ ಚಿನ್ನ ಅಡವಿಡಲು ಬಂದಿದ್ದರೆ ದಾಖಲೆ ತೋರಿಸಿ- ಕೃಷ್ಣಮೂರ್ತಿ ಆಚಾರ್ಯಗೆ ಸವಾಲು ಹಾಕಿದ ಅಬೂಬಕ್ಕರ್ https://udupitimes.com/udupi-times-14666/

Leave a Reply

Your email address will not be published. Required fields are marked *

error: Content is protected !!