ಶಿವಳ್ಳಿ ಶ್ರೀಕಾಳಿಕಾಂಬಾ ಮಹಿಳಾ ಮಂಡಳಿ ಉದ್ಘಾಟನೆ
ಉಡುಪಿ: ಶ್ರೀಕಾಳಿಕಾಂಬಾ ಮಹಿಳಾ ಮಂಡಳಿ ಶಿವಳ್ಳಿ, ಉಡುಪಿ ಇದರ ಉದ್ಘಾಟನಾ ಸಮಾರಂಭ ರವಿವಾರ ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರುಗಿತು.
ಪೆರಂಪಳ್ಳಿ ರಕ್ತೇಶ್ವರಿ ಕ್ಷೇತ್ರದ ಧರ್ಮದರ್ಶಿ ರಾಜೇಶ ಆಚಾರ್ಯ ನೂತನ ಸಂಘವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷರಾಗಿ ರಮಾ ಅಚ್ಯುತ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞೆ ಡಾ. ಆಶಾ, ವಿಶ್ವನಾಥ ಆಚಾರ್ಯ ಅಂಬಾಗಿಲು, ಗಿರಿಧರ ಆಚಾರ್ಯ ಕರಂಬಳ್ಳಿ, ಕೃಷ್ಣಯ್ಯ ಆಚಾರ್ಯ ಪೆರಂಪಳ್ಳಿ, ಶಾಲಾ ಮುಖ್ಯೋಪಾಧ್ಯಯ ಸಂತೋಷ್ ಕರ್ನೆಲಿಯೋ ಉಪಸ್ಥಿತರಿದ್ದರು.
ಸಂಘದ ನೂತನ ಅಧ್ಯಕ್ಷರಾದ ಸರೋಜಿನಿ ಜಯಕರ ಆಚಾರ್ಯ ಪ್ರಸ್ತಾವಿಕ ಭಾಷಣ ಮಾಡಿದರು, ಕಾರ್ಯದರ್ಶಿ ವಿದ್ಯಾ ಸುನಿಲ್ ಆಚಾರ್ಯ ಸ್ವಾಗತಿಸಿ, ರಶ್ಮಿ ರಾಜೇಶ್ ಆಚಾರ್ಯ ವಂದಿಸಿದರು. ಶಶಿಕಾಂತ್ ಆಚಾರ್ಯ ಕರಂಬಳ್ಳಿ ಕಾರ್ಯಕ್ರಮ ನಿರೂಪಿಸಿದರು.