ಕಾರ್ಕಳ: ಶೀಘ್ರದಲ್ಲೇ “ಸತ್ಯ ತಿಳಿಸಿ ಕ್ಷೇತ್ರ ಉಳಿಸಿ – ನಮ್ಮ ನಡೆ ಪರಶುರಾಮನ ಕಡೆ”

ಕಾರ್ಕಳ: ಪರಶುರಾಮನ ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ” ಪ್ರತಿಮೆಯ ಬಗ್ಗೆ ಸತ್ಯಾಸತ್ಯತೆ ಅಗ್ರಹಿಸಿ ಪಾದಯಾತ್ರೆ ಮಾಡುವುದಾಗಿ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.

ನಮ್ಮಿ ತುಳು ನಾಡು ಪರಶುರಾಮರ ಸೃಷ್ಟಿ ಎಂದೇ ಧಾರ್ಮಿಕ ಆಚರಣೆಗಳಲ್ಲಿ ಉಲ್ಲೇಖ ಇವೆ. ಈ ವಿಚಾರಗಳನ್ನು ನಾವೆಲ್ಲರೂ ಭಕ್ತಿ ಭಾವದಿಂದ ನಂಬುತ್ತೇವೆ.

ಕಾರ್ಕಳದಲ್ಲಿ ಪರಶುರಾಮ ಮೂರ್ತಿ ಆದಾಗ ಎಲ್ಲರೂ ಸಂತಸ ಪಟ್ಟಿದ್ದರು. ಆದರೆ ಧಾರ್ಮಿಕ ವಿಧಿಗಳನ್ನೆಲ್ಲ ಮಾಡಿದ ಬಳಿಕ ಆ ವಿಗ್ರಹ ಕಂಚಿನದ್ದು ಅಲ್ಲ ಎಂದಾದರೆ ಇದು ಸಮಗ್ರ ತುಳುನಾಡಿಗೆ ಮಾಡುವ ಪರಮ ಅನ್ಯಾಯ. ಇಂತಹ ಧರ್ಮ ವಿರೋಧಿ, ಹಾಗೂ ಧರ್ಮಕ್ಕೆ ಅಪಚಾರ ಆಗುವ ವಿಚಾರಗಳನ್ನು ನಾವು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.

ಈ ವಿಚಾರದಲ್ಲಿ ನಾವೆಲ್ಲರೂ ಸತ್ಯಂಶ ತಿಳಿಯಲಿಕ್ಕಾಗಿ ಸೆಪ್ಟೆಂಬರ್ 3ನೇ ವಾರ ಅತೀ ಶೀಘ್ರದಲ್ಲಿ ಪರಶುರಾಮನ ಎಡೆಗೆ ಕಾಲ್ನಡಿಗೆ ಜಾಥ ಹಮ್ಮಿ ಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.

ನಮ್ಮದೇನಿದ್ದರೂ ಧರ್ಮ ಉಳಿಸುವ ಹೋರಾಟ. ಧರ್ಮದ ಹೆಸರಲ್ಲಿ ಜನ ಸಮೂಹವನ್ನು ಬೇರ್ಪಡಿಸುವ ಅಥವಾ ಧರ್ಮವನ್ನು ಅಪಚಾರ ಗೊಳಿಸುವ ಮನ ಸ್ಥಿತಿಯ ವಿರುದ್ಧ ಹೋರಾಟ

ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ” ಎಂಬ ಜಾಥವನ್ನು ಹಮ್ಮಿಕೊಳ್ಳುತ್ತಿದ್ದು, ಧರ್ಮ ಉಳಿಸಲು ಎಲ್ಲರೂ ಸಹಕಾರ ನೀಡುವಂತೆ ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!