ಜೆಸಿಐ ಗಣೇಶಪುರ: ವಾಟರ್ ಪ್ಯೂರಿ ಫೈಯರ್ ವಿತರಣೆ ಮತ್ತು ನೀರು ಉಳಿಸಿ ಅಭಿಯಾನ

ಮಂಗಳೂರು: ಜೆಸಿಐ ಗಣೇಶಪುರವು, ಹಿಂದುಳಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯ ದ್ಯೇಯದೊಂದಿಗೆ, ಮಂಗಳೂರಿನ ಎಸ್‌ಡಿಎಂಸಿ ಅನುದಾನಿತ ಕಾಳಾವರ ಹಿರಿಯ ಪ್ರಾಥಮಿಕ ಶಾಲೆಗೆ, ಐಎಸ್‌ಐ ಮಾರ್ಕ್‌ನ ಬ್ರಾಂಡೆಡ್ ವಾಟರ್ ಪ್ಯೂರಿಫೈಯರ್‌ ಅನ್ನು ವಿತರಿಸಿತು.

ಜೆಸಿಐ ಗಣೇಶಪುರದ ಅಧ್ಯಕ್ಷ ಜೆ.ಸಿ. ಸನತ್ ಕುಮಾರ್ ನಾಯ್ಕ್, ಜೆಜೆಸಿ ವಿಭಾಗದ ಚೇರ್ ಪರ್ಸನ್ ಜೆಜೆಸಿ ಅಕ್ಷರ ಲವ ಕುಮಾರ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಉಪಸ್ಥಿತರಿದ್ದರು. ಸುಮಾರು 250 ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರಿನ ಪ್ರಯೋಜನವನ್ನು ಪಡೆಯಲಿದ್ದಾರೆ. ಮಂಗಳೂರಿನಲ್ಲಿ ಮಳೆ ಕಡಿಮೆಯಾಗುತ್ತಿದ್ದು, ಮುಂಬರುವ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಜೆಸಿಐ ಗಣೇಶಪುರವು ಕುಳಾಯಿ, ಕೃಷ್ಣಾಪುರ, ಕಾಟಿಪಳ್ಳ ಮತ್ತು ಕೈಕಂಬದಾದ್ಯಂತ ಸುಮಾರು 100 ಹೋಟೆಲ್‌ಗಳು ಮತ್ತು ಸಾರ್ವಜನಿಕ ಸೌಲಭ್ಯಗಳಲ್ಲಿ ವಾಶ್ ಬೇಸಿನ್‌ಗಳ ಬಳಿ ಬ್ರ್ಯಾಂಡೆಡ್ ಜೆಸಿಐ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ “ನೀರು ಉಳಿಸಿ ಅಭಿಯಾನ”ವನ್ನು ಪ್ರಾರಂಭಿಸಿದೆ. ಈ ಉಪಕ್ರಮವು ನೀರಿನ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಪ್ರತಿದಿನ 1,000 ಜನರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ.

Leave a Reply

Your email address will not be published. Required fields are marked *

error: Content is protected !!