ಕಲ್ಸಂಕ: ಗಾಯಾಳು ಯುವಕನ ರಕ್ಷಣೆ

ಉಡುಪಿ,ಸೆ.11: ಕಲ್ಸಂಕ ಗುಂಡಿಬೈಲು ಇಲ್ಲಿಯ ಪಾದಚಾರಿ ರಸ್ತೆಯಲ್ಲಿ ಆಯಾತಪ್ಪಿ ಬಿದ್ದು, ಗಾಯಾಳಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ರವಿವಾರ ನಡೆದಿದೆ. ದಾಖಲಿಸ್ಪಟ್ಟಿರುವ ಯುವಕ ಕಿರಣ್ (22ವ) ಎಂದು ತಿಳಿದುಬಂದಿದೆ. ತಲೆ ಭಾಗಕ್ಕೆ ಬಿದ್ದ ಪೆಟ್ಟಿನಿಂದ ರಕ್ತಸ್ರಾವಗೊಂಡು ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ, ತಕ್ಷಣ ಸಾರ್ವಜನಿಕರು ಒಳಕಾಡುವರಿಗೆ ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!