ಉಡುಪಿ: ಜೆಸಿಐ ಸಪ್ತಾಹ ಉದ್ಘಾಟನೆ
ಉಡುಪಿ: ಜೆಸಿಐ ಸಪ್ತಾಹ ಅಂಗವಾಗಿ ಜೆಸಿಐ ಉಡುಪಿ ಇಂದ್ರಾಳಿ ಘಟಕದ ವತಿಯಿಂದ ಕಾರ್ಯಕ್ರಮವು ಶ್ರೀವಿಷ್ಣು ಮೂರ್ತಿ ಶಾಲೆ ಕುದಿ ಪ್ರೌಢ ಶಾಲೆಯಲ್ಲಿ ದೀಪ ಬೆಳಗುವುದರ ಮೂಲಕ ಜೇಸಿ ಜೆಸಿಐ ಉಡುಪಿ ಇಂದ್ರಾಳಿ ಘಟಕದ ಅಧ್ಯಕ್ಷೆ ರೀಟಾ ಪಿರೇರಾ ಉದ್ಘಾಟಿಸಿದರು. ಜಾಧವ್ ಅವರು ಅಥಿತಿ ಭಾಷಣ ಮಾಡಿದರು.
ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ಶಿಬಿರ, ಅಧ್ಯಾಪಕರ ದಿನಾಚರಣೆ, ಅಧ್ಯಾಪಕರಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಜೆಸಿ ಶರ್ಲಿ ಮನೋಜ್ ಜೆಸಿಐ ಸಪ್ತಾಹದ ಮಹತ್ವ ತಿಳಿಸಿದರು. ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಜೆಸಿಐ ಉಡುಪಿ ಇಂದ್ರಾಳಿ ಘಟಕದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.