ಸುನಿಲ್ ಕುಮಾರ್‌ರವರೆ … ಬಸ್ ರೂಟ್ ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡೀ- ಸುಂದರ ಮಾಸ್ತರ್ ಆಗ್ರಹ

ಉಡುಪಿ: ಸುನಿಲ್ ಕುಮಾರ್ ಅವರೇ ಖಾಸಗೀ ಬಸ್ಸಲ್ಲೂ ಉಚಿತ ಪ್ರಯಾಣಕ್ಕಾಗೀ ಕೂಗಾಡೋದಲ್ಲಾ… ನಿಮಗೆ ನಿಜವಾಗಿಯೂ ಮಹಿಳೆಯರ ಮೇಲೆ ಕಾಳಜಿ ಅನುಕಂಪ ಇರೋದೇ ಆಗಿದ್ರೇ… ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಸ್ ರೂಟ್ ಗಳನ್ನು ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡೀ..‌…..ನಾವೂ ನಿಮ್ಮ ಜೊತೆ ಬರ್ತೇವೆ….ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.

ಬರಿಯಾ ನಾಟಕೀಯ ಕೂಗಾಟ ಬಿಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ರೂಟ್‌ಗಳನ್ನೂ ರಾಷ್ಟ್ರೀಕರಣಗೊಳಿಸಿದರೆ ಎಲ್ಲಾ ನಾಗರೀಕರಿಗೂ ತುಂಬಾ ಅನುಕೂಲ ಆಗಲಿದೆ. ಶಾಲಾ ವಿದ್ಯಾರ್ಥಿಗಳಿಗೂ ಅನುಕೂಲ ಆಗುತ್ತದೆ ಎಂದರು.

ಈ ಕೆಲಸ ಮೊದಲು ಮಾಡೀ ಆಗ ತನ್ನಿಂದ ತಾನಾಗಿಯೇ ಎಲ್ಲಾ ಮಹಿಳೆಯರಿಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಚಿತ ಪ್ರಯಾಣ ಸಿಗುತ್ತದೆ ಎಂದರು. ಅಷ್ಟಕ್ಕೂ ತಾವೇ ಮಂತ್ರಿಯಾಗಿದ್ದಾಗ ತಮ್ಮದೇ ಸರಕಾರದಲ್ಲಿ ಈ ಬಗ್ಗೆ ಚಕಾರವೆತ್ತದೇ ಈಗ ಇದ್ದಕ್ಕಿದ್ದಂತೆ ಬೊಬ್ಬೆ ಹೊಡೆಯುವುದು ನೋಡಿದರೇ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ತಮಗೆ ನುಂಗಲಾರದ ತುತ್ತಾದಂತೆ ಕಾಣುತ್ತದೆ. ಎಂದು ಸುಂದರ ಮಾಸ್ತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!