ಉಡುಪಿ/ಹೆಬ್ರಿ: ಮಟ್ಕಾ ಜುಗಾರಿ ಅಡ್ಡಗೆ ದಾಳಿ- ಮೂವರು ವಶಕ್ಕೆ
ಉಡುಪಿ ಮಾ.30(ಉಡುಪಿ ಟೈಮ್ಸ್ ವರದಿ): ಮಟ್ಕಾ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ, ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ನಗರ ಠಾಣಾ ಪೊಲೀಸರು, ಉಡುಪಿಯ ಪುತ್ತೂರು ಗ್ರಾಮದ ಅಂಬಾಗಿಲುವಿನ ಮೀನು ಮಾರುಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೊಡವೂರು ಗ್ರಾಮದ ಪ್ರವೀಣ್ ಪೂಜಾರಿ (45) ಹಾಗೂ ಸಿಟಿ ಬಸ್ ನಿಲ್ದಾಣ ಬಳಿಯ ಐರೋಡಿಕರ್ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಶಿರಿಬೀಡುವಿನ ರಾಮರಾಜ್ ಅರಸ್ (43) ಎಂಬಾತನನ್ನು ವಶಕ್ಕೆ ಪಡೆದು ಇಬ್ಬರಿಂದ ಕ್ರಮವಾಗಿ 3,200 ಹಾಗೂ 2,800 ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಹೆಬ್ರಿ ಪೊಲೀಸರು ಮುದ್ರಾಡಿಪೇಟೆಯ ಅಟೋರಿಕ್ಷಾ ನಿಲ್ದಾಣದ ಬಳಿ ವರಂಗ ಗ್ರಾಮದ ದಿನೇಶ ದೇವಾಡಿಗ (42) ಎಂಬಾತನನ್ನು ವಶಕ್ಕೆ ಪಡೆದು. ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ 1,520 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.