ಉಡುಪಿ: ಬೈಕ್ ಪುಡಿಗಟ್ಟಿದ ಅಕ್ರಮ ಮರಳು ಮಾಫಿಯಾದ ತಂಡ
ಉಡುಪಿ: ಅಕ್ರಮ ಮರಳು ಸಾಗಾಟದ ವಿರುದ್ಧ ಧ್ವನಿ ಎತ್ತಿದ್ದ ಸ್ಥಳೀಯ ನಿವಾಸಿ ದ್ವಿಚಕ್ರ ವಾಹನವನ್ನು ಮರಳು ಮಾಫಿಯದ ತಂಡವು ಧ್ವಂಸಗೊಳಿಸಿದ ಘಟನೆ ಉದ್ಯಾವರ ಮಠದಕುದ್ರುವಿನಲ್ಲಿ ನಡೆದಿದೆ.
ಮಠದ ಕುದ್ರುವಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದ್ದ ಬಗ್ಗೆ ಶನಿವಾರ ಅದಮಾರು ಮಠಾಧೀಶರಾದ ಈಶಪ್ರಿಯ ಶ್ರಿಗಳು ವಿರೋಧ ವ್ಯಕ್ತಪಡಿಸಿ ಪತ್ರಿಕಾಗೋಷ್ಠಿ ನಡೆಸಿದ್ದರು.
ಈ ಸಭೆಯಲ್ಲಿ ಸ್ಥಳೀಯ ಇಪ್ಪತ್ತಕ್ಕೂಹೆಚ್ಚು ನಿವಾಸಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ಭಾಸ್ಕರ್ ಕರ್ಕೆರಾ ಕೂಡ ಭಾಗವಹಿಸಿದ್ದರು. ಅವರು ನಿನ್ನೆ ಎಂದಿನಂತೆ ರಾತ್ರಿ ಅವರು ಕೆಲಸ ಮುಗಿಸಿ ತಮ್ಮ ಸ್ಕೂಟಿಯನ್ನು ರಸ್ತೆ ಕಾಮಗಾರಿ ಇದ್ದ ಪ್ರಯುಕ ್ತ ಮನೆಯಿಂದ ದೂರ ಇಟ್ಟು ಹೋಗಿದ್ದರು.
ಇಂದು ಬೆಳಿಗ್ಗೆ ಅವರು ಕೆಲಸಕ್ಕೆ ಹೋಗಲೆಂದು ಸ್ಕೂಟಿ ಬಳಿ ಬಂದು ನೋಡಿದಾಗ ದುಷ್ಕರ್ಮಿಗಳು ಅವರ ಸ್ಕೂಟಿ ಪುಡಿಗಟ್ಟಿದ್ದರು.
ಈ ಬಗ್ಗೆ ಭಾಸ್ಕರ್ ಕರ್ಕೆರಾ ಅವರು ಕಾಪು ಠಾಣೆಗೆ ದೂರು ನೀಡಿದ್ದಾರೆ.