ಮಂಗಳೂರು: ಟಿಪ್ಪರ್ ಧಾವಂತಕ್ಕೆ ಯುವತಿ ಸಹಿತ ಇಬ್ಬರ ಬಲಿ
ಮಂಗಳೂರು, ಮಾ.18: ನಗರದ ನಂತೂರು ಸರ್ಕಲ್ ನಲ್ಲಿ ಇಂದು ಮಧ್ಯಾಹ್ನ ನಡೆದ ಭೀಕರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಲ್ತಾನ್ಬತ್ತೇರಿ ನಿವಾಸಿ ಸ್ಯಾಮುಯೆಲ್ ಜೇಸುದಾಸ್ (66) ಹಾಗೂ ಅವರ ಸೊಸೆ ಶೃತಿ ಅವರ ದೊಡ್ಡಮ್ಮನ ಮಗಳು ಭೂಮಿಕಾ(17) ಮೃತಪಟ್ಟವರು.
ಪಂಪ್ವೆಲ್ ಕಡೆಯಿಂದ ಬಂದ ಟಿಪ್ಪರ್ ಅದೇ ಮಾರ್ಗದಲ್ಲಿ ಮುಂದೆ ಇದ್ದ ಆಕ್ಟೀವಾ ಸ್ಕೂಟರ್ಗೆ ನಂತೂರು ಸರ್ಕಲ್ ಬಳಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ನಲ್ಲಿದ್ದ ಸ್ಯಾಮುಯೆಲ್ ಹಾಗೂ ಭೂಮಿಕಾ ಕೆಳಕ್ಕೆ ಬಿದ್ದಿದ್ದು, ಈ ವೇಳೆ ಇಬ್ಬರ ತಲೆಯ ಮೇಲೆ ಟಿಪ್ಪರ್ ಚಕ್ರ ಹರಿದಿದೆ.
ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಟಿಪ್ಪರ್ ಚಾಲಕ ಸತೀಸ್ ಗೌಡ ಪಾಟೀಲ್ನ ಅಜಾಗರೂಕತೆಯೇ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜಾಗರೂಕತೆಯಿಂದ ಚಾಲನೆ ಮಾಡಿ ಇಬ್ಬರ ಸಾವಿಗೆ ಕಾರಣನಾದ ಟಿಪ್ಪರ್ ಚಾಲಕನಿಗೆ ಸ್ಥಳೀಯರು ಚೆನ್ನಾಗಿ ತದುಕಿದ್ದಾರೆ. ಮಾತ್ರವಲ್ಲದೆ, ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ನಂತೂರಿನಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
Rash driving is the only reason for accident
Rash driving is the only reason for accident and at the drivers are not following the rule and regulations seriously.
Traffic violations needs to cancel the licence for permanently. Two wheelers are sufferers for heavy vehicle drivers mistakes, may be end up their life. So sad.