ಸಾಲ ಹಿಂದಕ್ಕೆ ನೀಡದಕ್ಕೆ ಮನೆಯ ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುದು ಹಲ್ಲೆ!

ಶಂಕರನಾರಾಯಣ ಮಾ.16(ಉಡುಪಿ ಟೈಮ್ಸ್ ವರದಿ): ಸಾಲದ ಬಾಕಿ ಹಣ ನೀಡುವ ಸಲುವಾಗಿ ವ್ಯಕ್ತಿಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿರುವ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಷ್ಠ  ನಾಯ್ಕ ಇವರು ಕುಂದಾಪುರದ ಉಳ್ಳೂರಿನ  ಆರೋಪಿ ಸುರೇಶ  ಶೆಟ್ಟಿ  ಬಳಿ  10,000 ರೂ ಸಾಲ ಪಡೆದುಕೊಂಡಿದ್ದು, ಪಡೆದುಕೊಂಡ ಸಾಲದ ಹಣದಲ್ಲಿ  2000 ರೂ ಹಣ ನೀಡಲು  ಬಾಕಿ ಇರುತ್ತದೆ, ಇದೇ  ವಿಷಯದಲ್ಲಿ ಆರೋಪಿಯು  ಮಾ. 15 ರಂದು ಸಂಜೆ ವೇಳೆ ಕುಷ್ಠ ಅವರ  ಮನೆಯ  ಒಳಗಡೆ  ಅಕ್ರಮ ಪ್ರವೇಶ ಮಾಡಿ ನೀವು ಹಣ ಕೊಡಲು ಬಾಕಿ  ಇದೆ  ಆದರಿಂದ ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು  ಹೋಗುತ್ತೇನೆ ಎಂದು ಹೇಳಿ  ಗ್ಯಾಸ  ಸಿಲಿಂಡರ್ ತೆಗೆದುಕೊಂಡುಹೋಗುವಾಗ ಬೇಡ ಹಣ ಕೊಡುತ್ತೇನೆ, ಎಂದು ಹೇಳಿದಾಗ ಆರೋಪಿಯು  ಹೊಡೆದು ಹಲ್ಲೆ ಮಾಡಿದ್ದಾನೆ ಎಂಬುದಾಗಿ ಕುಷ್ಠ ಅವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

error: Content is protected !!