ಉಡುಪಿ: ವಿಶ್ವಮಹಿಳಾ ದಿನಾಚರಣೆ

ಉಡುಪಿ ಮಾ.15 (ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ ಸಂಸ್ಥೆಯ ಮಹಿಳಾ ಘಟಕದ ವತಿಯಿಂದ ತದನಂತರ ಸರಸ್ವತಿ ಕಿರಿಯ ಪ್ರಾಥಮಿಕ ಶಾಲೆ ಉಡುಪಿಯ ಸಭಾಂಗಣದಲ್ಲಿ ನಡೆದ ವಿಶ್ವಮಹಿಳಾ ದಿನಾಚರಣೆಯಲ್ಲಿ ನಾಲ್ವರು ಆದರ್ಶನೀಯ ಮಹಿಳೆಯರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯ ವಿಶೇಷ ಮಕ್ಕಳ ಸಂಸ್ಥೆಯಾದ ಆಶಾ ನಿಲಯದ ಮಕ್ಕಳಿಗಾಗಿ ಮಧ್ಯಾಹ್ನದ ಭೋಜನ ಕೂಟದ ವ್ಯವಸ್ಥೆಯನ್ನು ಮಾಡಲಾಯಿತು. ಮಹಿಳಾ ವಿಭಾಗದ ಅಧ್ಯಕ್ಷೇಯಾದ ಶೈನಿ  ಸತ್ಯಭಾಮಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೇರಿ ಜಾನ್, ನಿರ್ಮಲ ವಿ.ಕೆ, ಆಯೇಷಾ ಕುಟ್ಟಿ, ಶ್ರೀ ಕುಮಾರಿ ಎಂಬ ಮಹಿಳೆಯರು ಸನ್ಮಾನಿತಗೊಂಡರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ ನ ಪ್ರಸಕ್ತ ಸಾಲಿನ ಅಧ್ಯಕ್ಷರಾದ ಸುಗುಣ ಕುಮಾರ್, ಬಿನೇಶ್ ವಿ.ಸಿ, ಕೆ.ವಿ ಕುಮಾರ್, ಅಖಿಲಾ ಸಜಿ ಭಾಗವಹಿಸಿದ್ದರು. ಹಾಗೂ ನೀತು ಸುನಿಲ್, ಚಂದ್ರಿಕಾ ನಂಬಿಯಾರ್, ಶರ್ಮಿಳಾ ಸಜಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!