ಕರ್ನಾಟಕ ಚಲನಚಿತ್ರ ಅಕಾಡೆಮಿಗೆ 7 ಜನ ನೂತನ ಸದಸ್ಯರ ಆಯ್ಕೆ

ಬೆಂಗಳೂರು( ಉಡುಪಿ ಟೈಮ್ಸ್ ವರದಿ) :ಕರ್ನಾಟಕ ಚಲನಚಿತ್ರ ಅಕಾಡೆಮಿಗೆ 7 ಜನ ನೂತನ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಬೆಂಗಳೂರಿನ ನಾಲ್ಕು ಜನ ಹಾಗು ಉಡುಪಿ ಜಿಲ್ಲೆಯ ಇಬ್ಬರು ಸಮಿತಿಗೆ ಆಯ್ಕೆಯಾಗಿದ್ದಾರೆ. ಉಡುಪಿಯ ಮಣಿಪಾಲ ಕಾಲೇಜಿನ ಸ್ಕೂಲ್ ಆಫ್ ಕಮ್ಯುನಿಕೇಷನ್ ನ ಸಹ ಪ್ರದ್ಯಾಪಕರಾದ ಶ್ರೀ ರಾಜ್ ಗುಡಿ, ಕುಂದಾಪುರದ ಪ್ರದೀಪ್ ಕುಮಾರ್ ಶೆಟ್ಟಿ ಸೇರಿದಂತೆ ಬೆಂಗಳೂರಿನ ಅಶೋಕ್ ಕಶ್ಯಪ್, ಉಮೇಶ್ ನಾಯಕ್ , ಏಸ್ ಜಿ ತುಂಗಾ ರೇಣುಕಾ ,ಪಾಲ್ ಸುದರ್ಶನ್ ,ಸೋನು ಗೌಡ ಒಟ್ಟು 7 ಜನರನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಅಕಾಡೆಮಿ ಪೂರ್ಣ ಪ್ರಮಾಣದಲ್ಲಿ ರಚನೆ ಆದಂತೆ ಆಗಿದೆ.

1 thought on “ಕರ್ನಾಟಕ ಚಲನಚಿತ್ರ ಅಕಾಡೆಮಿಗೆ 7 ಜನ ನೂತನ ಸದಸ್ಯರ ಆಯ್ಕೆ

Leave a Reply

Your email address will not be published. Required fields are marked *

error: Content is protected !!