ಪ್ರಜಾ ಧ್ವನಿ ಯಾತ್ರೆಗೆ ಸಿಗುತ್ತಿರುವ ಜನಬೆಂಬಲ ಕಂಡು ಕಂಗಾಲದ ಕಮಲ ಪಡೆ- ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷ ನಾಯಕರು ಮಾಜಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರಜಾ ಧ್ವನಿ ಯಾತ್ರೆಗೆ ಅಭೂತಪೂರ್ವಜನಬೆಂಬಲವ್ಯಕ್ತವಾಗುತ್ತಿದ್ದು ಇದನ್ನು ಕಂಡ ಬಿಜೆಪಿ ನಾಯಕರು ಕಕ್ಕಾಬಿಕ್ಕಿಯಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಹೇಳಿಕೆಯನ್ನು ನೀಡುತ್ತಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ನಾಯಕರದ ಮೋದಿ ಹಾಗೂ ಅಮಿತ್ ಶಾ ರವರ ವರ್ಚಸ್ಸು ನಮ್ಮ ರಾಜ್ಯದಲ್ಲಿ ಕಡಿಮೆಯಾಗುತ್ತಿದ್ದು ಬಿಜೆಪಿಯ ಪಾಳ್ಯದಲ್ಲಿ ಚಿಂತೆಯನ್ನು ಉಂಟು ಮಾಡಿದೆ. ಇದರಿಂದಾಗಿ ರಾಜ್ಯ ಬಿಜೆಪಿ ನಾಯಕರ ಉಸಿರಾಟವೇ ನಿಂತು ಹೋಗಿದೆ. ಮೋದಿಯವರ ಬೆಲೆ ಏರಿಕೆ ನೀತಿ ಹಾಗೂ ಬೊಮ್ಮಾಯಿ ಅವರ 40 ಶೇಕಡಾ ಕಮಿಶನ್ ದಂಧೆಯಿಂದ ರಾಜ್ಯದ ಜನ ಬೇಸತ್ತಿದ್ದು ರಾಜ್ಯದ ಜನ ಉತ್ತಮ ಆಡಳಿತವನ್ನು ಬಯಸುತ್ತಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಯಾವುದೇ ಭರವಸೆಗಳು ಈಡೇರಿಸದೆ ಕೇವಲ ಕೋಮುವಾದಕ್ಕೆ ಜೋತು ಬಿದ್ದು ಜನರನ್ನು ಮೋಸಗಳಿಸುತ್ತಿರುವುದು ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಲ್ಲಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಪಕ್ಷವು ಧೂಳಿಪಟವಾಗಲಿದೆ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸುರೇಶೆಟ್ಟಿ  ಬನ್ನಂಜೆ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!