ಉಡುಪಿ: ಮತದಾರರ ಪಟ್ಟಿ ಹಗರಣ ಪ್ರಜಾಪ್ರಭುತ್ವದ ಕಗ್ಗೊಲೆ- ಮಂಜುನಾಥ್ ಭಂಡಾರಿ

ಉಡುಪಿ: ಮತದಾರರ ಹೆಸರನ್ನು  ಕೈಬಿಡುವ ಮೂಲಕ ಈ ಸರಕಾರ  ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಉಡುಪಿಯಲ್ಲಿ‌ ಮಾಧ್ಯಮದ ಜೊತೆ ಮಾತನಸಡಿದ ಅವರು ,ನ್ಯಾ.ಸಂತೋಷ್ ಹೆಗ್ಡೆಯವರೇ ಇದೊಂದು ಗಂಭೀರ ಆರೋಪ ಎಂದು ಹೇಳಿದ್ದಾರೆ. ಈ ಹಗರಣದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ತಲೆದಂಡವೂ ಆಗಿದೆ. ಆದ್ದರಿಂದ ಈ ಹಗರಣ ನಡೆದಿರುವುದು ಸತ್ಯ ಎಂದರ್ಥ. ಪ್ರತೀ ಕ್ಷೇತ್ರದಲ್ಲೂ 10 ರಿಂದ 15 ಸಾವಿರ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಮನೆಯಲ್ಲಿ ಇದ್ದವರು, ಮನೆಯಲ್ಲಿ ಇಲ್ಲದವರು ಎಲ್ಲರ ಹೆಸರನ್ನೂ ತೆಗೆದಿದ್ದಾರೆ. ಸರಕಾರ ಚಿಲುಮೆ ಎಂಬ ಥರ್ಡ್ ಪಾರ್ಟಿ ಮೂಲಕ ಈ ಬೋಗಸ್ ನಡೆಸಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ.ಪ್ರತೀ ಮತದಾರರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ಬು ಖಚಿತಪಡಿಸಿಕೊಳ್ಳಬೇಕು. ಕಾಂಗ್ರೆಸ್ ಕೂಡ ಈ ವಿಷಯದಲ್ಲಿ ಮತದಾರರ ಜೊತೆ ಇರಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!