ಕೋಟ: ತೋಟಕ್ಕೆ ನುಗ್ಗಿ ಹಾನಿ
ಕೋಟ ನ.30 (ಉಡುಪಿ ಟೈಮ್ಸ್ ವರದಿ): ಮನೆಯ ತೋಟದಲ್ಲಿ ನೀರು ಸರಬರಾಜಿಗೆ ಎಂದು ಹಾಕಿದ್ದ ಸ್ಪ್ರಿಂಕ್ಲರ್ ಹಾಗೂ ಪೈಪ್ ಲೈನ್ ನ್ನು ತುಂಡು ಮಾಡಿ ನಷ್ಟ ಮಾಡಿದ್ದು ಮಾತ್ರವಲ್ಲದೆ ಪ್ರಶ್ನಿಸಿದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಸಿಬಿಚೇನ ಜೋಸೆಫ್ ಎಂಬವರು ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿಬಿಚೇನ ಜೋಸೆಫ್ ಅವರು ನ. 29 ರಂದು ರಾತ್ರಿ ಮನೆಯಲ್ಲಿದ್ದ ವೇಳೆ ನೆರೆಕೆರೆಯ ವಾಸಿಗಳಾದ ಲಲಿತಾ ಆಚಾರ್ತಿ ಹಾಗೂ ಆಕೆಯ ಮಗಳ ಗಂಡ ಶ್ರೀನಾಥ ಆಚಾರಿ ಎಂಬವರು ಇವರ ಕೃಷಿ ತೋಟಕ್ಕೆ ನುಗ್ಗಿ ತೋಟದಲ್ಲಿ ನೀರು ಸರಬರಾಜಿಗೆಂದು ಅಳವಡಿಸಿದ್ದ ಸುಮಾರು 7 ಸ್ಪಿಂಕ್ಲರ್ ಹಾಗೂ ಪೈಪ್ ಲೈನ್ ಗಳನ್ನು ತುಂಡು ಮಾಡಿ ಸುಮಾರು 25,000 ನಷ್ಟ ಉಂಟು ಮಾಡಿದ್ದಾರೆ. ಹಾಗೂ ಈ ಬಗ್ಗೆ ಆಕ್ಷೇಪಿಸಿದಕ್ಕೆ ಹೊಡೆಯಲು ಬಂದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.