ಮಲ್ಪೆ: ಕೊಡವೂರು ನಿವಾಸಿ ನಾಪತ್ತೆ

ಮಲ್ಪೆ ನ.30(ಉಡುಪಿ ಟೈಮ್ಸ್ ವರದಿ): ಕೊಡವೂರಿನ ಲಕ್ಷ್ಮೀನಗರದಲ್ಲಿ ಮನೆಯಿಂದ ಹೋದ ವ್ಯಕ್ತಿಯೊಬ್ಬರು ವಾಪಸ್ಸು ಮನೆಗೆ ಬಾರದೆ ಅ.30 ರಿಂದ ನಾಪತ್ತೆಯಾಗಿದ್ದಾರೆ.

ಸ್ಥಳೀಯ ನಿವಾಸಿ ಉದಯ ಆಚಾರ್ಯ(43) ನಾಪತ್ತೆಯಾದವರು.

2 ವರ್ಷಗಳ ಹಿಂದೆ  ಪಾರ್ಶ್ವವಾಯುಗೆ ಒಳಗಾಗಿದ್ದ ಇವರು ಮನೆಯಲ್ಲಿಯೇ ಇರುತ್ತಿದ್ದರು. ಅಲ್ಲದೆ ಈ ಮೊದಲು ಇವರು ಮನೆಯಿಂದ ಹೊರಗಡೆ  ಹೋದವರು 10-15 ದಿನ ಬಿಟ್ಟು ಮನೆಗೆ ಬರುತ್ತಿದ್ದರು. ಆದರೆ ಅ.30 ರಂದು ಸಂಜೆ ಮನೆಯಿಂದ  ಹೋದವರು ಈ ವರೆಗೂ ವಾಪಸ್ಸು ಬಂದಿರುವುದಿಲ್ಲ. ಈ ಬಗ್ಗೆ ನಾಪತ್ತೆಯಾಗಿರುವ ಉದಯ ಆಚಾರ್ಯ ಅವರ ತಮ್ಮ ಗಣೇಶ ಆಚಾರ್ಯ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!