ಕುಂದಾಪುರ: ಬಸ್ಸಿನಿಂದ ಬಿದ್ದು ವ್ಯಕ್ತಿ ಮೃತ್ಯು

ಶಂಕರನಾರಾಯಣ ನ.27(ಉಡುಪಿ ಟೈಮ್ಸ್ ವರದಿ): ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಅಲ್ಬಾಡಿ ಗ್ರಾಮದ ಕೊಂಚಾಡಿ ಹಳನೀರು ಬೆಟ್ಟು ಎಂಬಲ್ಲಿ ನಡೆದಿದೆ.

ಹಳನೀರು ಬೆಟ್ಟು ನಿವಾಸಿ ಚಂದ್ರ ಶೇಖರ  ಮೃತಪಟ್ಟವರು. ಇವರು ನ.26 ರಂದು ಹಳನೀರು ಬೆಟ್ಟುವಿನಲ್ಲಿ ಬಸ್ಸಿಗೆ ಶೇಡಿಮನೆಗೆ ಕೊಡಲು ವೀಳ್ಯದೆಲೆ ಪಾರ್ಸಲ್ ನೀಡಿ ಇಳಿಯುತ್ತಿರುವಾಗ ಬಸ್ನಿಂದ ಕೆಳಗಡೆ ಇಳಿಯುವ ಮೊದಲೇ ಬಸ್ಸಿನ ನಿರ್ವಾಹಕ ಚಂದ್ರಶೇಖರ ನಾಯ್ಕ ಇವರು ಬಸ್ಸನ್ನು  ಚಲಾಯಿಸುವಂತೆ ಚಾಲಕನಿಗೆ ಸೂಚನೇ ನೀಡಿದ್ದು, ಈ ವೇಳೆ ಚಾಲಕ ಒಮ್ಮಲೇ ಬಸ್ಸನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಚಂದ್ರ ಶೇಖರ ನಾಯ್ಕ ಇವರು ಬಸ್ಸಿನಿಂದ ಕೆಳಗಡೆ  ಬಿದಿದ್ದರು. ಪರಿಣಾಮ ಬಸ್ಸಿನ ಹಿಂಬದಿಯ ಟಯರ್  ಚಂದ್ರಶೇಖರ ನಾಯ್ಕ ಅವರ ಮೇಲೆ ಹರಿದು ಗಂಭೀರ ಗಾಯಗೊಂಡಿದ್ದರು.

ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿ ರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ಮಗ ಅರುಣ್ ನಾಯ್ಕ ಎಂಬವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!