ಉಡುಪಿ: ಅಂಗಡಿಗೆ ನುಗ್ಗಿ 46 ಸಾವಿರ ರೂ. ನಗದು ಕಳವು

ಉಡುಪಿ(ಉಡುಪಿ ಟೈಮ್ಸ್ ವರದಿ): ಉದ್ಯಾವರ ಬಲಾಯಿಪಾದೆಯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಈ ಬಗ್ಗೆ ಕೊರಂಗ್ರಪಾಡಿ ಗ್ರಾಮದ ಹೊನ್ನಪ್ಪ ಶಿವಣ್ಣ ಕುಂಬಾರ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಬಲಾಯಿಪಾದೆಯ ಮಹಾಲಕ್ಷ್ಮಿ ಕಾಂಪ್ಲೆಕ್ಸ್‌ ನಲ್ಲಿ ಮಂಜುಶ್ರೀ ಹರ್ಬಲ್ಸ್‌ ಎಂಬ ಅಂಗಡಿಯನ್ನು ನಡೆಸಿಕೊಂಡಿದ್ದಾರೆ.

ನ.25 ರ ರಾತ್ರಿಯಿಂದ ನ 26 ರ ಬೆಳಿಗ್ಗಿನ ಅವಧಿಯಲ್ಲಿ ಈ ಅಂಗಡಿಯ ಶೆಟರ್‌ ನ್ನು ಮುರಿದು ಒಳ ನುಗ್ಗಿದ ಕಳ್ಳರು ಆಫೀಸ್‌ನ ಬೀಗ ಮುರಿದು, ಕ್ಯಾಶ್‌ ಡ್ರಾವರಿನಲ್ಲಿದ್ದ 46,000 ರೂ. ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!