ಬ್ರಹ್ಮಾವರ: ಚೇರ್ಕಾಡಿ ಪಂಚಾಯತ್ ಸದಸ್ಯನಿಂದ ಪಂಪ್ ಆಪರೇಟರ್’ಗೆ ಹಲ್ಲೆ

ಬ್ರಹ್ಮಾವರ ನ.13(ಉಡುಪಿ ಟೈಮ್ಸ್ ವರದಿ): ತಾಲೂಕಿನ ಕನ್ನಾರುನಲ್ಲಿ ರಸ್ತೆ ಕಾಮಾಗಾರಿ ವೇಳೆ ನೀರಿನ ಪೈಪ್ ಒಡೆದ ವಿಚಾರಕ್ಕೆ ಸಂಬಂಧಿಸಿ ಚೇರ್ಕಾಡಿ ಪಂಚಾಯತ್‌ನ ವಾಟರ್‌ಮೇನ್‌ ಜಗದೀಶ ಆಚಾರಿ ಎಂಬವರಿಗೆ ಹಲ್ಲೆ ಮಾಡಿರುವುದಾಗಿ ಪಂಚಾಯತ್‌ ಸದಸ್ಯ ನವೀನ್‌ ಬಂಗೇರ ಅವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಗದೀಶ ಆಚಾರಿ ಅವರು ಚೇರ್ಕಾಡಿ ಪಂಚಾಯತ್‌ ನಲ್ಲಿ ಸುಮಾರು 4 ವರ್ಷದಿಂದ ವಾಟರ್‌ಮೇನ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಇವರು ನ.12 ರಂದು ಮಧ್ಯಾಹ್ನ 3:00 ಗಂಟೆಗೆ ಕನ್ನಾರುನಲ್ಲಿ ರಸ್ತೆ ಕಾಮಾಗಾರಿ ಮಾಡುವ ಸಮಯ ಪೈಪ್‌ ಒಡೆದಿತ್ತು.  ಈ ಬಗ್ಗೆ ಪಂಚಾಯತ್‌ ಅಧ್ಯಕ್ಷರು  ಗುತ್ತಿಗೆದಾರರಲ್ಲಿ ಮಾತನಾಡಿ ನಾಳೆ ದಿನ ಸರಿ ಮಾಡುವ  ಎಂದು ಹೇಳಿದ್ದರು.

ಈ ನಡುವೆ  ಚೇರ್ಕಾಡಿ ಪಂಚಾಯತ್‌ ಸದಸ್ಯರಾದ ನವೀನ್‌ ಬಂಗೇರ ರವರು ಜಗದೀಶ ಆಚಾರಿ ಅವರಿಗೆ ಕರೆ ಮಾಡಿ ಹಾಳಾದ ಪೈಪ್‌ಲೈನ್‌ ಸರಿಪಡಿಸುವ ಬಗ್ಗೆ ಬೈದು ಜೀವ ಬೆದರಿಕೆ ಹಾಕಿದ್ದರು. ಅಲ್ಲದೆ ಬಳಿಕ  ಸಂಜೆ 5:10 ರ ಸಮಾರಿಗೆ  ಪಂಚಾಯತ್‌ನಲ್ಲಿ ಹಾರಿಸಲಾದ ಬಾವುಟವನ್ನು ಇಳಿಸುವ ಸಲುವಾಗಿ ಜಗದೀಶ ಅವರು ಪೇತ್ರಿ ಪೇಟೆಯ ಕೃಷ್ಣ ಮಡಿವಾಳ  ಅಂಗಡಿ ಬಳಿ ನಡೆದುಕೊಂಡು ಹೋಗುವಾಗ ನವೀನ್‌ ಬಂಗೇರರವರು ಏಕಾಎಕಿ ಅವರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಪೈಪ್‌ಲೈನ್‌ ಹಾಳಾದ ವಿಚಾರದಲ್ಲಿ ಬಾರಿ ಮಾತಾನಾಡುತ್ತೀಯಾ ಎಂದು ಬೈದು ಹಲ್ಲೆ ಮಾಡಿ ಮತ್ತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹಾಗೂ ಹಲ್ಲೆಯಿಂದ ಅಸ್ವಸ್ಥಗೊಂಡ ಅವರು ಬಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!